ಆ್ಯಪ್ನಗರ

ಹಳ್ಳಿ ಮಕ್ಕಳ ಈ ಸಡಗರಕ್ಕೆ ಬೆಲೆ ಕಟ್ಟಲಾಗುವುದೇ? : ಈ ಖುಷಿಗೆ ಆನಂದ್ ಮಹೇಂದ್ರಾ ಫಿದಾ

ಜಾರುತ್ತಾ ಕೆರೆಗೆ ಹಾರಿ ಈಜುವ ಹಳ್ಳಿ ಮಕ್ಕಳ ಖುಷಿಯ ವಿಡಿಯೋವೊಂದು ಈಗ ವೈರಲ್ ಆಗುತ್ತಿದೆ. ಈ ವಿಡಿಯೋ ಕಂಡು ಉದ್ಯಮಿ ಆನಂದ್ ಮಹೇಂದ್ರಾ ಅವರೇ ಫಿದಾ ಆಗಿದ್ದಾರೆ.

Vijaya Karnataka Web 6 Jul 2020, 7:04 pm
ಹಳ್ಳಿ ಜೀವನವೇ ಹಾಗೆ ಅದು ಖುಷಿ ಹೂದೋಟ... ನಗರ ಪ್ರದೇಶದಲ್ಲಿರುವಷ್ಟು ವಾಹನಗಳ ಸದ್ದು ಗದ್ದಲವಿಲ್ಲ, ಪ್ರಶಾಂತ ವಾತಾವರಣಗಳಿಗೆ ಕೊರತೆ ಇಲ್ಲ. ಹಕ್ಕಿಗಳ ಚಿಲಿಪಿಲಿ ಇಂಚರ, ಹಳ್ಳ ಕೊಳ್ಳದ ಈಜಾಟ ಎಲ್ಲವೂ ಮನಸ್ಸಿಗೆ ಅಪ್ಯಾಯಮಾನ. ಆಧುನಿಕತೆಯ ಥಳುಕು ಬಳುಕಿಗೆ ಅಷ್ಟೇನು ತೆರೆದುಕೊಳ್ಳದ ಹಳ್ಳಿಗಳಲ್ಲಿ ಖುಷಿಗೇನು ಕೊರತೆ ಇಲ್ಲ. ಇದು ಕೂಡಾ ಅಂತಹದ್ದೇ ಒಂದು ವಿಡಿಯೋ.
Vijaya Karnataka Web Childhood Memories
| Screengrab from video | Courtesy : Manoj Kumar/Twitter


Also Read : ಮದುವೆ ಮಂಟಪದಲ್ಲಿ ಲ್ಯಾಪ್‌ಟಾಪ್ ಹಿಡಿದು ಕುಳಿತ ವಧು! : ಯಾಕೆ ಎಂಬುದೇ ಚರ್ಚೆ!

ಹಳ್ಳಿ ಮಕ್ಕಳು ತಮ್ಮದೇ ಆಟದ ಖುಷಿಯಲ್ಲಿ ಕಳೆಯುತ್ತಿರುವ ಅದ್ಭುತ ವಿಡಿಯೋ ಇದು. ಈ ವಿಡಿಯೋ ಹಲವರ ಬಾಲ್ಯವನ್ನೂ ನೆನಪಿಸುವಂತಿದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋವನ್ನು ಕಂಡು ಉದ್ಯಮಿ ಆನಂದ್ ಮಹೇಂದ್ರಾ ಅವರು ಫಿದಾ ಆಗಿದ್ದಾರೆ.

Also Read : ತಾನು ಕೊರೊನಾ ಸೋಂಕಿತೆಯೆಂದು ಗೊತ್ತಾದಾಗ ಈಕೆ ಮಾಡಿದ್ದೇನು ಗೊತ್ತಾ?: ಕಣ್ಣೀರು ತರಿಸುವ ವಿಡಿಯೋವಿದು

ನಗರ ಪ್ರದೇಶದಲ್ಲಿ ಆಧುನೀಕತೆಯ ಖುಷಿಗೇನು ಕೊರತೆ ಇಲ್ಲ. ಇಲ್ಲಿ ವೀಕೆಂಡ್ ಖುಷಿಗೆ ಅಥವಾ ಸಂಜೆಯ ವಾಕಿಂಗ್‌ಗೆ ಪಾರ್ಕ್‌, ವಾಟರ್‌ ಪಾರ್ಕ್‌ಗಳೆಲ್ಲಾ ಸಿಗುತ್ತವೆ. ಇಲ್ಲಿ ವಿವಿಧ ಆಟಗಳನ್ನು ಆಡಿ ಮಕ್ಕಳು ಖುಷಿಪಡುತ್ತಾರೆ. ಆದರೆ, ಹಳ್ಳಿ ಮಕ್ಕಳಿಗೆ ಈ ರೀತಿಯ ಆಟಗಳು ಸಿಗದು. ಆದರೆ, ಇಲ್ಲೊಂದು ಕಡೆ ಹಳ್ಳಿ ಮಕ್ಕಳೇ ವಾಟರ್‌ ಪಾರ್ಕ್‌ನಲ್ಲಿ ಇರುವಂತಹ ವಾಟರ್ ಸ್ಲೈಡ್ ನಿರ್ಮಿಸಿದ್ದಾರೆ...! ಅಂದರೆ, ಎತ್ತರದ ಪ್ರದೇಶದಿಂದ ಇಳಿಜಾರಿನಲ್ಲಿ ಜಾರಿಗೊಂಡು ಬಂದು ಮಕ್ಕಳು ನೀರಿಗೆ ಧುಮುಕುವ ವಿಡಿಯೋ ಇದು. ಈ ವಿಡಿಯೋದಲ್ಲೊಂದು ಮುಗ್ಧ ಖುಷಿ ಕಾಣುತ್ತದೆ. ಜೊತೆಗೆ, ಇರುವ ಸೌಲಭ್ಯಗಳಲ್ಲೇ ಖುಷಿಪಡುವ ಉದಾತ್ತ ಮನಸ್ಸೂ ಕಾಣಸಿಗುತ್ತದೆ.

Also Read : ಸಮುದ್ರ ದಂಡೆಯಲ್ಲಿ ವೆಡ್ಡಿಂಗ್ ಫೋಟೋಶೂಟ್ : ನಂತರ ನಡೆದದ್ದೆಲ್ಲಾ ಆಘಾತಕಾರಿ ಘಟನೆ!

ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ನಾಂದಿ ಫೌಂಡೇಷನ್ ಸಿಇಒ ಮನೋಜ್ ಕುಮಾರ್ ಹಂಚಿಕೊಂಡಿದ್ದರು. ಇದನ್ನೇ ವಿಡಿಯೋವನ್ನು ಆನಂದ್ ಮಹೇಂದ್ರ ಅವರೂ ಶೇರ್ ಮಾಡಿಕೊಂಡದ್ದರು. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹಲವರ ಗಮನ ಸೆಳೆದಿದೆ. ಕೆಲವರಂತೂ ತಮ್ಮ ಬಾಲ್ಯದ ದಿನಗಳನ್ನೂ ನೆನಪಿಸಿಕೊಂಡಿದ್ದಾರೆ.

ನಿಜಕ್ಕೂ ಈ ವಿಡಿಯೋವನ್ನು ಕಂಡಾಗ ಖುಷಿಯಾಗುತ್ತದೆ. ಜೊತೆಗೆ, ಹಳ್ಳಿಯ ಆಟದ ಖುಷಿಯ ಅನಾವರಣವೂ ಆಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ