ಆ್ಯಪ್ನಗರ

ಪ್ರವಾಸಿಗರ ನಡುವೆ ಸ್ವಚ್ಛಂದವಾಗಿ ವಿಹರಿಸಿದ ಚಿರತೆ : ಕಾಡಿನ ಅತಿಥಿಯೊಂದಿಗೆ ಜನರ ಚೆಲ್ಲಾಟಕ್ಕೆ ಭಾರೀ ಟೀಕೆ

ಆ ಚಿರತೆ ಜನರ ನಡುವೆ ಭಯವಿಲ್ಲದೆ ಓಡಾಡುತ್ತಿತ್ತು. ಆದರೆ, ಅಲ್ಲಿದ್ದ ಕೆಲವರು ತಾವು ವನ್ಯಜೀವಿಗಳೊಂದಿಗೆ ಹೇಗೆ ಇರಬೇಕೆಂಬುದನ್ನೇ ಮರೆತಂತಿದ್ದರು ಎಂಬುದು ಕೂಡಾ ಸತ್ಯ.

Vijaya Karnataka Web 15 Jan 2021, 11:06 am
ಅದು ಚಿರತೆಯ ಸ್ವಚ್ಛಂದ ವಿಹಾರ... ಜನ ಸುತ್ತಮುತ್ತ ಇದ್ದರೂ ಇರಲಿಲ್ಲ ಕಾಡುಮೃಗಕ್ಕೆ ಭಯ... ಕ್ಯಾಮೆರಾದಲ್ಲಿ ಸೆರೆಯಾಗಿದೆ ವಿಶಿಷ್ಟ ಸನ್ನಿವೇಶ...
Vijaya Karnataka Web leopard
| Screengrab from video | Courtesy : Parveen Kaswan, IFS/Twitter


ಕಾಡಿನ ಕ್ರೂರ ಮೃಗಗಳೂ ಕೆಲವೊಮ್ಮೆ ತುಂಬಾ ಮೃದುವಾಗಿ ವರ್ತಿಸುತ್ತವೆ. ಆದರೆ, ನಾಡಿನಲ್ಲಿರುವ ಜನರು ಮಾತ್ರ ಬಹುತೇಕ ಸಂದರ್ಭಗಳಲ್ಲಿ ವನ್ಯಜೀವಿಗಳೊಂದಿಗೆ ಹೇಗೆ ವರ್ತಿಸಬೇಕು ಎಂಬುದನ್ನೇ ಮರೆತು ಬಿಡುತ್ತಾರೆ. ಅದಕ್ಕೆ ಸಾಕ್ಷಿ ಈ ದೃಶ್ಯ. ಇದು ಸೆರೆಯಾಗಿದ್ದು ಹಿಮಾಚಲ ಪ್ರದೇಶದ ರಾಷ್ಟ್ರೀಯ ಉದ್ಯಾನವನದೊಳಗಿನ ರಸ್ತೆಯಲ್ಲಿ.

Also Read : ಹವಾಮಾನ ವರದಿ ನೀಡುವಾಗ ಹಿಮದಲ್ಲಿ ಜಾರಿದ ಪತ್ರಕರ್ತ : ಬ್ಯಾಲೆನ್ಸಿಂಗ್ ಕೌಶಲ್ಯಕ್ಕೆ ನೆಟ್ಟಿಗರ ಶಹಬ್ಬಾಸ್

ಹಿಮಾಚಲ ಪ್ರದೇಶದ ಕುಲು ಜಿಲ್ಲೆಯ ತೀರ್ಥನ್ ಕಣಿವೆಯಲ್ಲಿ ಸೆರೆಯಾದ ದೃಶ್ಯವಿದು. ಈ ಕಣಿವೆಯ ರಾಷ್ಟ್ರೀಯ ಉದ್ಯಾನವನದ ರಸ್ತೆಯಲ್ಲಿ ಚಿರತೆಯೊಂದು ಸ್ವಚ್ಛಂದವಾಗಿ ವಿಹರಿಸಿದೆ. ಇದನ್ನು ಕಂಡ ಕೂಡಲೇ ಜನ ತಮ್ಮ ವಾಹನದಿಂದ ಕೆಳಗಿಳಿದು ಕುತೂಹಲದಿಂದ ನೋಡಿದ್ದಾರೆ. ಜೊತೆಗೆ, ಅಲ್ಲೇ ಇದ್ದ ಊರಿನವರು ಕೂಡಾ ಯಾವುದೇ ಭಯವಿಲ್ಲದೆ ಚಿರತೆಯ ಪಕ್ಕ ಬಂದು ನಿಂತಿದ್ದರು...! ನೋಡ ನೋಡುತ್ತಿದ್ದಂತೆಯೇ ಜನರ ಸಂಖ್ಯೆ ಅಲ್ಲಿ ಹೆಚ್ಚಾಗಿತ್ತು. ಆದರೂ ಚಿರತೆ ಭಯಪಡಲಿಲ್ಲ. ಬದಲಾಗಿ, ಜನರ ಮಧ್ಯದಲ್ಲೇ ಓಡಾಡುತ್ತಿತ್ತು...! ಪ್ರವಾಸಿಗರು ಕೂಡಾ ಚಿರತೆಯ ಪಕ್ಕದಲ್ಲೇ ನಿಂತು ಫೋಟೋ ತೆಗೆಯುತ್ತಿದ್ದರು.

Also Read : ಇಂಜೆಕ್ಷನ್ ನೀಡುವಾಗ ಭಯದಲ್ಲಿ ಕಿರುಚಾಡುವ ಯುವಕ! : ತಮಾಷೆಯ ವಿಡಿಯೋ ವೈರಲ್


ಒಂದು ಹಂತದಲ್ಲಿ ಚಿರತೆ ಅಲ್ಲೇ ಇದ್ದ ವ್ಯಕ್ತಿಯ ಮೊಣಕೈಯನ್ನು ಹಿಡಿದು ಎಳೆದಿದೆ. ಆದರೆ, ಅದೃಷ್ಟವಶಾತ್ ಈ ಕಾಡಿನ ಅತಿಥಿಯಿಂದ ಯಾರಿಗೂ ಗಾಯಗಳಾಗಿಲ್ಲ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

Also Read : ಮಗ ಪರೀಕ್ಷೆಯಲ್ಲಿ ಪಾಸ್ ಆದ ಖುಷಿ : ಈ ತಾಯಿಯ ಸಂಭ್ರಮಾಚರಣೆಯೇ ಅದ್ಭುತ

ಇದು ಆಗಷ್ಟೇ ತಾಯಿಯಿಂದ ದೂರವಾಗಿ ಸ್ವತಂತ್ರ ಜೀವನ ಶುರು ಮಾಡಿರುವ ಎಂಟು ಅಥವಾ ಒಂಭತ್ತು ತಿಂಗಳ ಮರಿ ಚಿರತೆ ಎಂದು ತಜ್ಞರು ಹೇಳಿದ್ದಾರೆ. ಆದರೆ, ಇಂತಹ ಸನ್ನಿವೇಶಗಳಲ್ಲಿ ಜನ ಕೊಂಚ ಎಚ್ಚರಿಕೆ ವಹಿಸಬೇಕಾಗುತ್ತದೆ. ಮೃಗಗಳ ಸ್ವಚ್ಛಂದ ಬದುಕಿಗೂ ಎಲ್ಲರೂ ಬೆಲೆ ಕೊಡಬೇಕಾಗುತ್ತದೆ. ಯಾಕೆಂದರೆ, ಎಲ್ಲಾ ಸಂದರ್ಭದಲ್ಲೂ ಕಾಡುಮೃಗಗಳು ಶಾಂತವಾಗಿರುತ್ತವೆ ಎಂದು ಹೇಳಲು ಸಾಧ್ಯವೇ ಇಲ್ಲ. ದಾಳಿ ಮಾಡುವುದು ಪ್ರಾಣಿಗಳ ಸಹಜ ಗುಣ. ಹೀಗಾಗಿ, ಪ್ರಾಣಿಗಳಿಂದ ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು ಜನರಿಗೂ ಒಳ್ಳೆಯದು. ಈ ಮೂಲಕ ತಮ್ಮನ್ನು ರಕ್ಷಣೆ ಮಾಡಿದಂತೆಯೂ ಆಗುತ್ತದೆ. ಪ್ರಾಣಿಗಳ ಬದುಕಿಗೂ ಗೌರವ ಕೊಟ್ಟಂತಾಗುತ್ತದೆ. ಆದರೆ, ಈ ದೃಶ್ಯದಲ್ಲಿ ಕೆಲವು ಯುವಕರು ವನ್ಯಜೀವಿಗಳೊಂದಿಗೆ ಹೇಗೆ ವರ್ತಿಸಬೇಕು ಎಂಬುದನ್ನೇ ಮರೆತಂತಿದ್ದರು. ಅದು ಬಲು ಅಪಾಯಕಾರಿ...

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ