ಆ್ಯಪ್ನಗರ

Great Escape : ಹಾವಿನ ದಾಳಿಯಿಂದ`ಅದ್ಭುತ'ವಾಗಿ ಜೀವ ಉಳಿಸಿಕೊಂಡ ಮುಂಗುಸಿ...!

ಮುಂಗುಸಿಯೊಂದು ಹಾವಿನ ದಾಳಿಯಿಂದ ಅದ್ಭುತವಾಗಿ ಜೀವ ಉಳಿಸಿಕೊಂಡಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದು, ಪ್ರಾಣ ಹೋಗುವ ಸಂದರ್ಭದಲ್ಲಿ ಮುಂಗುಸಿ ತೋರಿದ ಸಮಯಪ್ರಜ್ಞೆಗೆ ಎಲ್ಲರೂ ಫಿದಾ ಆಗಿದ್ದಾರೆ.

Vijaya Karnataka Web 30 Nov 2019, 5:32 pm
ಅರೆಕ್ಷಣ ತಡವಾಗಿದ್ದರೂ ಆ ಮುಂಗುಸಿ ಹಾವಿಗೆ ಆಹಾರವಾಗಬೇಕಾಗಿತ್ತು. ಆದರೆ, ಇನ್ನೇನು ಪ್ರಾಣ ಹೋಗುತ್ತದೆ ಎಂಬಂತಹ ಸ್ಥಿತಿಯಲ್ಲಿ ಮುಂಗುಸಿ ಧೈರ್ಯ ಮಾಡಿ ಜಂಪ್ ಮಾಡಿದೆ. ಈ ಅದ್ಭುತ ಜಂಪ್ ಮುಂಗುಸಿಗೆ ಜೀವದಾನವನ್ನು ನೀಡಿದೆ.
Vijaya Karnataka Web Deadly Attack
ಸಾಂದರ್ಭಿಕ ಚಿತ್ರ | Image Courtesy: pixabay


Also Read : ಭಾರತದ ದೇಶಭಕ್ತಿ ಗೀತೆಯನ್ನು ಹಾಡಿದ ರಷ್ಯಾದ ಸೈನಿಕರು...! : ಇಲ್ಲಿದೆ ಅದ್ಭುತ ವಿಡಿಯೋ

ಐಎಫ್‌ಎಸ್ ಅಧಿಕಾರಿ ಸುಸಂತ ನಂದ ಈ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಬೃಹತ್ ಹಾವೊಂದು ಮುಂಗುಸಿಯನ್ನು ತಿನ್ನಲು ಹವಣಿಸುವ ದೃಶ್ಯವಿದೆ. ಭರ್ಜರಿ ಬೇಟೆಯ ಆಸೆಯಿಂದ ಹಾವು ಹೆಡೆ ಎತ್ತಿ ದಾಳಿ ಮಾಡಿದರೆ, ಮುಂಗುಸಿ ಅದ್ಭುತ ರೀತಿಯಲ್ಲಿ ತಪ್ಪಿಸಿಕೊಂಡಿದೆ. ಹಾವು ದಾಳಿ ಮಾಡುವ ಸಮಯ ಮತ್ತು ಮುಂಗುಸಿ ಚಂಗನೆ ನೆಗೆಯುವ ಸಮಯ ಒಂದೇ ಆಗಿದ್ದರಿಂದ ಹಾವಿಗೆ ಬೇಟೆ ತಪ್ಪಿದರೆ, ಮುಂಗುಸಿಯ ಪ್ರಾಣ ರಕ್ಷಣೆಯಾಗಿದೆ.

Also Read : ಸೇನಾ ಕ್ಯಾಂಟೀನ್‌ಗೆ ಆನೆಯ ರಗಡ್ ಎಂಟ್ರಿ...! : ಎಲ್ಲಾ ಪುಡಿ ಪುಡಿ...: ಇಲ್ಲಿದೆ ವಿಡಿಯೋ

ಸುಸಂತ ನಂದ ಈ ವಿಡಿಯೋದಲ್ಲಿ ಪ್ರಾಣಿಗಳಿಗೆ ಬಾಲ ಎಷ್ಟು ಉಪಯೋಗವಾಗುತ್ತದೆ ಎಂಬುದನ್ನೂ ವಿವರಿಸಿದ್ದಾರೆ. ತಪ್ಪಿಸಿಕೊಳ್ಳಲು ಮತ್ತು ಹಾರುವಾಗ ಸಮತೋಲನ ಕಾಪಾಡಿಕೊಳ್ಳಲು ಮುಂಗುಸಿ ಇಲ್ಲಿ ಬಾಲವನ್ನು ರಾಡಾರ್ ತರ ಬಳಸಿದೆ ಎಂದು ಸುಸಂತ ನಂದ ಹೇಳಿದ್ದಾರೆ.

Also Read : ಬೆಳಗ್ಗೆ ಒಂದು ಕಪ್ ಟೀ ಕುಡಿಯದೆ ಕೆಲಸಕ್ಕೆ ಬರುವುದೇ ಇಲ್ಲ ಪೊಲೀಸ್ ಇಲಾಖೆಯ ಈ ಕುದುರೆ...!

ಈ ವಿಡಿಯೋ ಈಗ ಸಖತ್ ವೈರಲ್ ಆಗುತ್ತಿದೆ. ಜೊತೆಗೆ, ಮುಂಗುಸಿಯ ಸಮಯಪ್ರಜ್ಞೆ ಹಾಗೂ ಧೈರ್ಯಕ್ಕೆ ಎಲ್ಲರೂ ಫಿದಾ ಆಗಿದ್ದಾರೆ.

ಈ ಹಿಂದೆ ಕತ್ತೆ ಕಿರುಬದ ದಾಳಿಯಿಂದ ಚಿರತೆಯೊಂದು ಇದೇ ರೀತಿ ತಪ್ಪಿಸಿಕೊಳ್ಳುವ ವಿಡಿಯೋವನ್ನು ಸುಸಂತ ನಂದ ಶೇರ್ ಮಾಡಿಕೊಂಡಿದ್ದರು. ಈ ವಿಡಿಯೋ ಕೂಡಾ ಸಾಕಷ್ಟು ವೈರಲ್ ಆಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ