ಆ್ಯಪ್ನಗರ

ಪ್ರಾರ್ಥನೆಯ ನೇರಪ್ರಸಾರದ ವೇಳೆ ಗೊತ್ತಿಲ್ಲದೆ ಆನ್ ಆಯ್ತು ಫಿಲ್ಟರ್...!

ಧರ್ಮಗುರುಗಳೊಬ್ಬರ ಪ್ರಾರ್ಥನೆಯ ನೇರಪ್ರಸಾರದ ಸಂದರ್ಭದಲ್ಲಿ ಗೊತ್ತಿಲ್ಲದೆ ಕಣ್ತಪ್ಪಿನಿಂದ ಅಚಾನಕಾಗಿ ಫಿಲ್ಟರ್ ಆನ್ ಆಗಿತ್ತು. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

Vijaya Karnataka Web 25 Mar 2020, 8:00 pm
ಕೊರೊನಾ ವೈರಸ್ ಕಾರಣಕ್ಕೆ ಇಟಲಿಯ ತತ್ತರಿಸಿ ಹೋಗಿದೆ. ಹೀಗಾಗಿ, ಇಟಲಿ ಬಹುತೇಕ ಸ್ತಬ್ಧವಾಗಿ ಹೋಗಿದೆ. ರಕ್ಕಸ ವೈರಾಣು ಕಾರಣದಿಂದಾದ ಸಾವು ನೋವುಗಳನ್ನು ಕಂಡು ನೊಂದು ಹೋಗಿರುವ ಇಟಲಿಯ ಜನತೆ ಈಗ ಮನೆಯಿಂದಲೂ ಹೊರಬರುವುದಕ್ಕೆ ಹೆದರುತ್ತಿದ್ದಾರೆ. ಇಲ್ಲಿನ ದೃಶ್ಯಗಳನ್ನು ಕಂಡಾಗ ಕರುಳು ಹಿಂಡಿದಂತಾಗುತ್ತದೆ.
Vijaya Karnataka Web Image  by Gerd Altmann from Pixabay
| Representative image | Image by Gerd Altmann from Pixabay


Also Read : ಪಕ್ಕಾ ಫಿಲ್ಮಿ ಸ್ಟೈಲ್‌ನಲ್ಲಿ ಟ್ರಕ್ ಚೇಸ್ ಮಾಡಿದ ಪೊಲೀಸರು : ಸಖತ್ತಾಗಿದೆ ವಿಡಿಯೋ

ಕೊರೊನಾದ ಭೀಕರತೆಯನ್ನು ಕಣ್ಣಾರೆ ಕಂಡ ಜನ ಮನೆಯಿಂದ ಹೊರಗೆ ಬರುತ್ತಲೇ ಇಲ್ಲ. ಹೀಗಾಗಿ, ಇಲ್ಲಿ ಧರ್ಮಗುರುಗಳೊಬ್ಬರು ನೇರ ಪ್ರಸಾರದಲ್ಲಿ ಪ್ರಾರ್ಥನೆ ಮತ್ತು ಸಂದೇಶ ನೀಡಲು ಮುಂದಾಗಿದ್ದರು. ಆದರೆ, ಈ ವೇಳೆ, ಗೊತ್ತಿಲ್ಲದೆ ಫಿಲ್ಟರ್ ಆನ್ ಆಗಿದೆ. ಹೀಗಾಗಿ, ವಿಚಿತ್ರ ಚಿತ್ರಗಳೆಲ್ಲಾ ಸ್ಕ್ರೀನ್ ಮೇಲೆ ಕಾಣಿಸಿಕೊಂಡಿದೆ. ಕಣ್ತಪ್ಪಿನಿಂದ ಹೀಗೆ ಆಗಿರುವುದರಿಂದ ಆ ಕ್ಷಣಕ್ಕೆ ಧರ್ಮಗುರುಗಳಿಗೆ ಇದು ಗೊತ್ತಾಗಿರಲಿಲ್ಲ. ಹೀಗಾಗಿ, ಅವರು ಸಂದೇಶ ನೀಡುವ ದೃಶ್ಯ ಫೇಸ್‌ಬುಕ್‌ನಲ್ಲೇ ಹಾಗೆಯೇ ಪ್ರಸಾರವಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.

Also Read : ಹೆತ್ತವರೊಂದಿಗೆ ಭರ್ಜರಿ ಸ್ಟೆಪ್ಸ್‌ ಹಾಕುವ ಈ ಬಾಲಕನ ಕೌಶಲ್ಯಕ್ಕೆ ಬೆರಗಾಗಲೇಬೇಕು

ಜನರಿಗೆ ಧೈರ್ಯ ತುಂಬುವ ಸಲುವಾಗಿ, ಜನರ ಒಳಿತಿಗಾಗಿ ಪ್ರಾರ್ಥಿಸುವ ಸದುದ್ದೇಶದಿಂದ ಈ ಧರ್ಮಗುರುಗಳು ನೇರಪ್ರಸಾರದಲ್ಲೇ ಜನರ ಮುಂದೆ ಬಂದಿದ್ದರು. ಈ ವೇಳೆ, ಗೊತ್ತಿಲ್ಲದೆ ಇಂತಹ ಸನ್ನಿವೇಶವನ್ನು ಅವರು ಎದುರಿಸಬೇಕಾಯಿತು.

Also Read : ಅದ್ಭುತ... ಇಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಸಿಕ್ತು ಅಪೂರ್ವ ಸ್ವಾಗತ

ಹಾಗಂತ, ಹೀಗೆ ಆಗುತ್ತಿರುವುದು ಇದೇ ಮೊದಲೇನು ಅಲ್ಲ. ಅನೇಕರು ಇಂತಹ ಸಮಸ್ಯೆ ಎದುರಿಸಿದ್ದಾರೆ. ಇತ್ತೀಚೆಗೆ ವರದಿಗಾರರೊಬ್ಬರು ಹವಾಮಾನ ವರದಿ ನೀಡುವ ಸಂದರ್ಭದಲ್ಲೂ ಹೀಗೆಯೇ ಆಗಿತ್ತು. ಬಳಿಕ ಸ್ವತಃ ಆ ವರದಿಗಾರರೇ ಈ ವಿಡಿಯೋವನ್ನು ತಮ್ಮ ಫೇಸ್‌ಬುಕ್‌ ಪೇಜ್‌ನಲ್ಲಿ ಹಂಚಿಕೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ