ಆ್ಯಪ್ನಗರ

ಪ್ರಯಾಣಿಕರ ಸುರಕ್ಷತೆಗಾಗಿ ರಸ್ತೆ ಗುಡಿಸಿದ ಪೊಲೀಸ್ : ಸಾಮಾಜಿಕ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ

ಇದು ಸಂಚಾರಿ ಪೊಲೀಸ್ ಒಬ್ಬರ ಸಮಾಜ ಸೇವೆಯ ದೃಶ್ಯ. ಇವರ ನಿಸ್ವಾರ್ಥ ಸೇವೆ ಈಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

Vijaya Karnataka Web 26 Oct 2020, 6:26 pm
ಜನರ ಸೇವೆಗೆ ಇರುವ ಇಲಾಖೆಯಲ್ಲಿ ಪೊಲೀಸ್ ಇಲಾಖೆಗೂ ಅಗ್ರಸ್ಥಾನವಿದೆ. ದೇಶದಲ್ಲಿ ಜನ ಸುರಕ್ಷಿತವಾಗಿದ್ದಾರೆ ಎಂದರೆ ಗಡಿ ಕಾಯುವ ನಮ್ಮ ಕೆಚ್ಚೆದೆಯ ಯೋಧರು ಮತ್ತು ಪೊಲೀಸರು ಕಾರಣ ಎಂಬುದರಲ್ಲಿ ಸಂಶಯವೇ ಇಲ್ಲ. ಯಾವುದೇ ಸಂದರ್ಭದಲ್ಲೂ ತಕ್ಷಣ ನೆರವಿಗೆ ಬರುವವರೇ ಆರಕ್ಷಕರು. ಹಬ್ಬಗಳ ಸಂದರ್ಭದಲ್ಲಿ ಎಲ್ಲರೂ ಕುಟುಂಬದೊಂದಿಗೆ ಹಬ್ಬ ಆಚರಿಸುತ್ತದ್ದರೆ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿರುತ್ತಾರೆ. ಅದೇ ಇಲಾಖೆಯ ಶಿಸ್ತಿಗೆ ಸಾಕ್ಷಿ. ಇಂತಹ ಶಿಸ್ತಿನ ಇಲಾಖೆಯಲ್ಲಿರುವ ಹೃದಯವಂತ, ದಕ್ಷ ಸಿಪಾಯಿಗಳು ಈ ಇಲಾಖೆಯನ್ನು ಇನ್ನಷ್ಟು ಜನಸ್ನೇಹಿಯನ್ನಾಗಿಸುತ್ತಾರೆ. ಅದಕ್ಕೆ ಸಾಕ್ಷಿ ಸಂಚಾರಿ ಪೊಲೀಸ್.
Vijaya Karnataka Web Odisha Traffic Cop
| Image Courtesy : @cpbbsrctc/Twitter


ಒಡಿಶಾದ ಟ್ರಾಫಿಕ್ ಪೊಲೀಸ್ ಒಬ್ಬರು ಈಗ ಎಲ್ಲರ ಗಮನ ಸೆಳೆದಿದ್ದಾರೆ. ತಮ್ಮ ಕರ್ತವ್ಯದಾಚೆಗೆ ಇವರು ನಿರ್ವಹಿಸಿದ ಕೆಲಸ ಈಗ ಎಲ್ಲರ ಹೃದಯ ಗೆದ್ದಿದೆ. ಪ್ರಯಾಣಿಕರಿಗೆ ಕಷ್ಟವಾಗಬಾರದು ಎಂಬ ಕಾರಣಕ್ಕೆ ಈ ಪೊಲೀಸ್ ರಸ್ತೆಯಲ್ಲಿ ಮರಳುಗಳಲ್ಲೆನ್ನಾ ಗುಡಿಸಿ ಸ್ವಚ್ಛಗೊಳಿಸಿದ್ದಾರೆ. ಈ ಪೊಲೀಸ್ ಅಧಿಕಾರಿ ಕಟಕ್‌ನ ಸಿಕಾರ್‌ಪುರ್ ಚೌಕ್ ಬಳಿ ರಸ್ತೆಯನ್ನು ಗುಡಿಸುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.


Also Read : ಮಾಸ್ಕ್‌ ಧರಿಸಲ್ಲವೆಂದು ವಿಮಾನದಲ್ಲಿ ಗಲಾಟೆ ಮಾಡಿದ ಪತಿಗೆ ಪತ್ನಿಯಿಂದಲೇ ಕಪಾಳಮೋಕ್ಷ...!

ಒಂದಷ್ಟು ಸಂದರ್ಭದಲ್ಲಿ ಸಂಚಾರಿ ಪೊಲೀಸರಿಗೆ ಜನ ಬೈಯ್ಯುದುಂಟು. ಆದರೆ, ಇಂತಹ ಒಳ್ಳೆಯ ಕೆಲಸಗಳನ್ನೂ ಜನ ಅಷ್ಟೇ ಪ್ರೀತಿಯಿಂದ ಸ್ವಾಗತಿಸುತ್ತಾರೆ. ಇದೇ ಕಾರಣಕ್ಕೆ ವಾಹನ ಸ್ಕಿಡ್ ಆಗಬಾರದು ಎಂದು ರಸ್ತೆಯನ್ನು ಗುಡಿಸಿರುವ ಕಟಕ್ ನಗರ ಸಂಚಾರಿ ಪೊಲೀಸ್ ಠಾಣೆಯ ಲಲಿತ್ ಮನೋಹರ್ ರೂಟ್ ಅವರು ರಾತ್ರೋರಾತ್ರಿ ಇಂಟರ್‌ನೆಟ್ ಸ್ಟಾರ್ ಆಗಿದ್ದಾರೆ. ಇವರ ಮಾದರಿ ಕಾರ್ಯವನ್ನು ಎಲ್ಲರೂ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.

Also Read : ಶಹಬ್ಬಾಸ್... ಮೆಚ್ಚಬೇಕು ಈ ಪೊಲೀಸ್ ಅಧಿಕಾರಿಯನ್ನು

ಸದ್ಯ 22 ಸೆಕೆಂಡುಗಳ ಈ ವಿಡಿಯೋ ಕ್ಲಿಪನ್ನು ಬಹುತೇಕರು ತಮ್ಮ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ದೃಶ್ಯ ನೋಡಿದ ಬಹುತೇಕರು ರೂಟ್ ಅವರ ಕಾರ್ಯವನ್ನು ಕೊಂಡಾಡಿದ್ದಾರೆ. ಇನ್ನು ಕೆಲವರು ಈ ಕೆಲಸ ಮಾಡಬೇಕಾಗಿದ್ದ ಪಾಲಿಕೆ ಸೇರಿದಂತೆ ಇತರ ಇಲಾಖೆಯನ್ನು ಟೀಕಿಸಿದ್ದಾರೆ. ಇನ್ನೊಂದೆಡೆ, ಲಲಿತ ಮನೋಹರ್ ಅವರ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಪೊಲೀಸ್ ಆಯುಕ್ತ ಡಾ.ಸುಧಂಶು ಸಾರಂಗಿ ಇವರನ್ನು ಗೌರವಿಸಿ ಪ್ರಶಂಸಿಸಿದ್ದಾರೆ.


Also Read : ರಸ್ತೆಯಲ್ಲಿ ನಿಂತ ನೀರು ಹೋಗಲು ಸ್ವತಃ ಹಾರೆ ಹಿಡಿದು ಮಣ್ಣು ತೆಗೆದ ಟ್ರಾಫಿಕ್ ಪೊಲೀಸ್ : ವಿಡಿಯೋ ವೈರಲ್

ಹಾಗಂತ, ಇದೊಂದೇ ಅಲ್ಲ. ಈ ಹಿಂದೆ ಕೂಡಾ ಇದೇ ರೀತಿ ಅನೇಕ ಹೃದಯಸ್ಪರ್ಶಿ ನಡೆಯನ್ನು ಪೊಲೀಸರು ಪ್ರದರ್ಶಿಸಿದ್ದರು. ವರ್ಷದ ಹಿಂದೆ ಬೆಂಗಳೂರಿನ ಸಂಚಾರಿ ಪೊಲೀಸ್ ಒಬ್ಬರು ರಸ್ತೆಯಲ್ಲಿ ನಿಂತಿದ್ದ ನೀರನ್ನು ಸ್ವಚ್ಛಗೊಳಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದರು. ಈ ವಿಡಿಯೋ ಕೂಡಾ ಸಾಕಷ್ಟು ವೈರಲ್ ಆಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ