ಆ್ಯಪ್ನಗರ

ವಿದ್ಯುತ್ ಕಂಬವೇರಿ ತಂತಿಗಳನ್ನು ದುರಸ್ತಿ ಮಾಡುವ ಸಾಧಕಿ : ಇದು ಸ್ಫೂರ್ತಿದಾಯಕ ಕತೆ

ವಿದ್ಯುತ್ ಇಲಾಖೆಯಲ್ಲಿ ಕೆಲಸ ಮಾಡುವ ಮಹಿಳೆಯೊಬ್ಬರು ಸ್ವತಃ ತಾನೇ ಕಂಬವೇರಿ ದುರಸ್ತಿ ಕಾರ್ಯ ನಡೆಸುವ ವಿಡಿಯೋ ವೈರಲ್ ಆಗುತ್ತಿದೆ. ಈ ಧೀರೆ ಎಲ್ಲರಿಗೂ ಸ್ಫೂರ್ತಿ ಮತ್ತು ಮಾದರಿಯಾಗಿದ್ದಾರೆ.

Vijaya Karnataka Web 12 Aug 2020, 7:43 pm
ವಿದ್ಯುತ್ ತಂತಿಗಳನ್ನು ದುರಸ್ತಿ ಮಾಡಲು ಏಣಿ ಇಲ್ಲದೆ ಮಹಿಳಾ ಸಿಬ್ಬಂದಿಯೊಬ್ಬರು ಕಂಬಯೇರುವುದನ್ನು ಎಂದಾದರೂ ನೋಡಿದ್ದೀರಾ...? ಬಹುಶಃ ನೋಡಿರಲಿಕ್ಕಿಲ್ಲ. ಒಂದೊಮ್ಮೆ ನೋಡಿದ್ದರೂ ಇದು ತೀರಾ ಅಪರೂಪವೇನೋ. ಆದರೆ, ಸದ್ಯ ಇಂತಹದ್ದೊಂದು ವಿಡಿಯೋ ವೈರಲ್ ಆಗುತ್ತಿದೆ. ಇಲ್ಲೊಬ್ಬರು ಮಹಿಳೆ ಏಣಿಯ ಸಹಾಯವೇ ಇಲ್ಲದೆ ಕಂಬವನ್ನೇರಿ ವಿದ್ಯುತ್ ತಂತಿಗಳನ್ನು ದುರಸ್ತಿ ಮಾಡುತ್ತಾರೆ.
Vijaya Karnataka Web Usha Jagdale
| Screengrab from video | Courtesy : @airnewsalerts/Twitter


Also Read : `ಶಾಲೆ ಮತ್ತೆ ಶುರುವಾಗುವುದು ಬೇಡ' : ಮುಗ್ಧ ಪುಟಾಣಿ ಅಳುವ ಮುದ್ದಾದ ವಿಡಿಯೋ ವೈರಲ್

ಮಹಾರಾಷ್ಟ್ರದ ಬೀಡ್‌ನಲ್ಲಿ ಕರ್ತವ್ಯ ನಿರ್ವಹಿಸುವ ಉಷಾ ಜಗಲಾಲೆ ಇಂತಹ ಧೀರೆ. ಸಾಮಾನ್ಯವಾಗಿ ವಿದ್ಯುತ್ ಇಲಾಖೆಯಲ್ಲಿ ತಂತಿ ದುರಸ್ತಿ ಸೇರಿದಂತೆ ಹಲವು ಕೆಲಸಗಳಲ್ಲಿ ಪುರುಷರೇ ತೊಡಗಿರುತ್ತಾರೆ. ಇಂತಹ ಕೆಲಸಗಳಲ್ಲಿ ಮಹಿಳೆಯರು ತೊಡಗಿಕೊಳ್ಳುವುದು ತೀರಾ ಅಪರೂಪ. ಆದರೆ, ಉಷಾ ಇದಕ್ಕೆ ಅಪವಾದ. ಎಂತಹ ಪರಿಸ್ಥಿತಿಯಲ್ಲಿ ಗ್ರಾಹಕರಿಂದ ದೂರುಗಳು ಬಂದರೂ ಅದನ್ನು ಪರಿಹರಿಸಲು ಇವರು ತಕ್ಷಣ ಕಾರ್ಯಪ್ರವೃತ್ತರಾಗುತ್ತಾರೆ. ಲಾಕ್‌ಡೌನ್ ಸಂದರ್ಭದಲ್ಲೂ ಜನರಿಗೆ ಯಾವುದೇ ರೀತಿಯಲ್ಲಿ ವಿದ್ಯುತ್ ಸಮಸ್ಯೆ ಎದುರಾಗಬಾರದು ಎಂದು ಇವರು ನಿರಂತರ ಕರ್ತವ್ಯ ನಿರ್ವಹಿಸಿದ್ದರು. ಇವರು ಇಂತಹ ಸವಾಲಿನ ಕೆಲಸವನ್ನು ಅತ್ಯಂತ ಪ್ರೀತಿಯಿಂದ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಇವರ ಸೇವಾ ಗುಣ ಈಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

Also Read : ಭೂಕುಸಿತದ ಸ್ಥಳದಲ್ಲಿ ಮಾಲಿಕರಿಗಾಗಿ ಹೊಟ್ಟೆಗೂ ಏನನ್ನೂ ತಿನ್ನದೆ ಕಾಯುತ್ತಿವೆ ಮುದ್ದು ಶ್ವಾನಗಳು!

ಬೀಡ್ ಜಿಲ್ಲೆಯ ಉಷಾ ಜಗದಾಲೆ ಮಹಾರಾಷ್ಟ್ರ ರಾಜ್ಯ ವಿದ್ಯುತ್ ವಿತರಣಾ ಕಂಪನಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ರೈತ ಕುಟುಂಬದಿಂದ ಬಂದಿರುವ ಉಷಾ ಉತ್ತಮ ಕ್ರೀಡಾಪಟುವೂ ಹೌದು. ಶೈಕ್ಷಣಿಕ ಅಭ್ಯಾಸದ ದಿನಗಳಲ್ಲಿ ಇವರು ಮಹಾರಾಷ್ಟ್ರದ ರಾಜ್ಯ ಮಟ್ಟದ ಖೋ-ಖೋ ತಂಡದ ನಾಯಕಿಯಾಗಿದ್ದರು. ಅಲ್ಲದೆ, ಕ್ರೀಡೆಯಲ್ಲಿ ಹಲವಾರು ಚಿನ್ನದ ಪದಕಗಳನ್ನೂ ಇವರು ಪಡೆದಿದ್ದರು. ಆದರೆ, ಮನೆಯಲ್ಲಿ ಬಡತನ ಇದ್ದುದರಿಂದ ಕ್ರೀಡಾಕ್ಷೇತ್ರದಲ್ಲಿಯೇ ಇವರಿಗೆ ಮುನ್ನಡೆಯಲು ಹೆಚ್ಚು ಅವಕಾಶ ಇರಲಿಲ್ಲ. ವಿವಾಹದ ಬಳಿಕ ತನ್ನ ಗಂಡನ ಮನೆಯಲ್ಲಿ ನಿರ್ವಹಿಸುವ ಹೈನುಗಾರಿಕೆಯಲ್ಲಿ ಇವರು ಕೂಡಾ ಸಹಾಯ ಮಾಡುತ್ತಿದ್ದರು.

ಇಲ್ಲಿದೆ ವೈರಲ್ ವಿಡಿಯೋ :

Also Read : ಮೆಲ್ಲನೆ ಕಳ್ಳ ಹೆಜ್ಜೆ ಇಡುತ್ತಾ ಬಂದು ಚಿಪ್ಸ್‌ ಪ್ಯಾಕ್ ಹೊತ್ತೊಯ್ದ ಹಕ್ಕಿ...!

2013ರಲ್ಲಿ ಇವರಿಗೆ ಕ್ರೀಡಾ ಕೋಟಾದಲ್ಲಿ ಎಂಎಸ್‌ಇಡಿಸಿಎಲ್‌ನಲ್ಲಿ ಕೆಲಸ ಸಿಕ್ಕಿತ್ತು. ಆರಂಭದಲ್ಲಿ ಇವರು ಕಚೇರಿಯ ಕೆಲಸ ನೀಡಿದ್ದರು. ಆದರೆ, ಕಚೇರಿ ಕೆಲಸ ನಿರ್ವಹಿಸದೆ ಟೆಕ್ನಿಶಿಯಲ್ ಕೆಲಸ ಮುಂದುವರಿಸಲು ಬಯಸಿದ ಉಷಾ ಅದರಂತೆ ಸವಾಲನ್ನು ಸ್ವೀಕರಿಸಿ ಮುನ್ನಡೆದಿದ್ದರು. ಹೀಗೆ ಸತತ ಪರಿಶ್ರಮ ಪಟ್ಟು ಕರ್ತವ್ಯ ನಿರ್ವಹಿಸಿರುವ ಉಷಾ ಈಗ ಇಲಾಖೆಯಲ್ಲಿ ಒಳ್ಳೆಯ ಹೆಸರು ಸಂಪಾದಿಸಿದ್ದಾರೆ. ಈ ಮೂಲಕ ಇವರು ಇತರ ಮಹಿಳೆಯರಿಗೂ ಸ್ಫೂರ್ತಿ, ಮಾದರಿಯಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ