ಆ್ಯಪ್ನಗರ

ಚಾಲೆಂಜ್! : ಡ್ರೋನ್ ಕಂಡು ಓಡುವ ಇವರನ್ನು ನೋಡಿ ನೀವು ನಗದೆ ಇರಲು ಸಾಧ್ಯವಿಲ್ಲ!

ಡ್ರೋನ್ ಕ್ಯಾಮೆರಾ ಕಂಡು ಎದ್ನೋ ಬಿದ್ನೋ ಎಂದು ಜನ ಓಡುವ ವಿಡಿಯೋ ಈಗ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿ ಎಲ್ಲರೂ ಬಿದ್ದು ಬಿದ್ದು ನಗುತ್ತಿದ್ದಾರೆ.

Vijaya Karnataka Web 17 Apr 2020, 11:21 pm
ದೂರದಲ್ಲಿ ಡ್ರೋನ್ ಕಂಡರೂ ಸಾಕು, ಒಬ್ಬರೂ ಅರೆಕ್ಷಣವೂ ಅಲ್ಲಿ ನಿಲ್ಲುವುದಿಲ್ಲ... ಓಡುವ ಭರದಲ್ಲಿ ಎಡವಿ ಕೆಳಗೆ ಬಿದ್ದರೂ ಚಿಂತೆಯಿಲ್ಲ... ಓಟವೊಂದೇ ಇವರ ಗುರಿ... ಇಷ್ಟಕ್ಕೂ ಇವೆಲ್ಲಾ ಪೊಲೀಸರು ಪ್ರಯೋಗಿಸಿದ ಡ್ರೋನ್ `ಅಸ್ತ್ರ'ದಲ್ಲಿ ಸೆರೆಯಾದ ದೃಶ್ಯದ ಝಲಕ್... ಕೆಲವರಂತೂ ತಮ್ಮ ಮುಖವನ್ನು ಮುಚ್ಚಿಕೊಳ್ಳಲು ಮಾಡುವ ಪ್ರಯತ್ನ ನೋಡಿದರೆ ನಗು ತಡೆಯಲು ಸಾಧ್ಯವಾಗುವುದಿಲ್ಲ...
Vijaya Karnataka Web Police drone video
| Screengrab from video | Courtesy : Fcebook


Also Read : ಸಿಂಹದ ಗರ್ಜನೆ ಕೇಳಿದ್ದೀರಿ, ಗೊರಕೆ ಸದ್ದು ಕೇಳಿದ್ದೀರಾ? ಅದು ಇನ್ನೂ ಭಯಾನಕ!

ಕೊರೊನಾ ವೈರಸ್ ಅಬ್ಬರ ಜಾಸ್ತಿಯಾಗುತ್ತಿದ್ದಂತೆಯೇ ದೇಶದಾದ್ಯಂತ ಲಾಕ್‌ಡೌನ್ ಘೋಷಣೆಯಾಗಿದ್ದು ಹಳೇ ವಿಷಯ. ಈ ಲಾಕ್‌ಡೌನ್ ನಿಯಮಕ್ಕೆ ಕ್ಯಾರೇ ಎನ್ನದೆ ಜನ ಮನೆಯಿಂದ ಹೊರಗೆ ಬರುತ್ತಿದ್ದದ್ದು ಕೂಡಾ ಹಳೆಯ ವಿಷಯವೇ... ಜನ ಹೀಗೆ ಅಗತ್ಯವೇ ಇಲ್ಲದಿದ್ದರೂ ಮನೆಯಿಂದ ಹೊರಗೆ ಬರುತ್ತಿರುವುದನ್ನು ಕಂಡಿದ್ದ ಪೊಲೀಸರು ಇವರಿಗೆ ಲಾಠಿ ರುಚಿ ತೋರಿಸಿದ್ದರು. ಆದರೆ, ಇದಾದ ಬಳಿಕ ಖಾಕಿ ಟೀಮ್ ಬಳಸಿದ ಅಸ್ತ್ರವೇ ಡ್ರೋನ್...

Also Read : ತನ್ನ ವಾಹನ ಅಪಘಾತ ಮಾಡಿ ಇನ್ನೊಂದು ಕಾರು ಕದ್ದು ಪರಾರಿ : ಇಲ್ಲೂ ಆಕೆಗೆ ಕಾಡಿತು ವಿಧಿ!

ಗ್ರಾಮದ ತುಂಬೆಲ್ಲಾ ಜನ ಮನೆಯಲ್ಲಿ ಇರದೆ ಒಟ್ಟಾಗಿ ತಿರುಗಾಡುವುದು, ಆಟ ಆಡುತ್ತಿರುವುದು ಗಮನಕ್ಕೆ ಬರುತ್ತಿದ್ದಂತೆಯೇ ಪೊಲೀಸರು ಡ್ರೋನ್ ಮೂಲಕ ಈ ದೃಶ್ಯವನ್ನು ಸೆರೆ ಹಿಡಿಯುತ್ತಿದ್ದರು. ಈ ಮೂಲಕ ಜನ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಸುತ್ತಾಡುವುದಕ್ಕೆ ಕಡಿವಾಣ ಹಾಕಲು ಪ್ರಯತ್ನಿಸಿದ್ದರು. ಸದ್ಯ ತಮಿಳುನಾಡಿನ ಸೇಲಂ ನಗರ ಪೊಲೀಸರು ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯವನ್ನು ರಿಲೀಸ್ ಮಾಡಿದ್ದಾರೆ. ಡ್ರೋನ್ ಕಂಡ ತಕ್ಷಣ ಓಡುವ ಜನರ ದೃಶ್ಯ ಇಲ್ಲಿದೆ. ಈ ದೃಶ್ಯ ನೋಡಿದಾಗ ನಗೆಯುಕ್ಕುತ್ತದೆ... ಎರಡು ದಿನಗಳ ಹಿಂದೆ ತಮಿಳುನಾಡಿನ ತಿರುಪುರ್ ಪೊಲೀಸರು ಕೂಡಾ ಇಂತಹದ್ದೇ ವಿಡಿಯೋ ಬಿಡುಗಡೆ ಮಾಡಿದ್ದರು.



ಸದ್ಯ ಈ ವಿಡಿಯೋ ಸಖತ್ ಆಗಿಯೇ ವೈರಲ್ ಆಗುತ್ತಿದೆ. ಡ್ರೋನ್ ಕ್ಯಾಮೆರಾಕ್ಕೆ ಹೆದರಿ ಜನರೆಲ್ಲಾ ತಪ್ಪಿಸಿಕೊಳ್ಳಲು ಮಾಡುವ ಯತ್ನವೂ ಎಲ್ಲರ ಮುಖದಲ್ಲೂ ನಗು ಮೂಡಿಸುತ್ತಿದೆ. ಇತ್ತೀಚೆಗೆ ಕೇರಳ ಪೊಲೀಸರು ಕೂಡಾ ಈ ಡ್ರೋನ್ ಕ್ಯಾಮರಾದಲ್ಲಿ ಸೆರೆಯಾದ ವಿಡಿಯೋವನ್ನು ಬಿಡುಗಡೆ ಮಾಡಿದ್ದರು. ಈ ವಿಡಿಯೋ ಕೂಡಾ ವೈರಲ್ ಆಗಿತ್ತು.

Also Read : Viral Video : ಮದುವೆ ಹಾಲ್‌ನಿಂದಲೇ ವಧು, ವರ ಇಬ್ಬರೂ ಅರೆಸ್ಟ್‌...!


ಬೆಂಗಳೂರಿನಲ್ಲೂ ಪೊಲೀಸರು ಡೋನ್ ಮೂಲಕ ಕಣ್ಣಿಟ್ಟಿದ್ದಾರೆ. ಮನೆಯಿಂದ ಹೊರಬಂದವರ ಮೇಲೆ ಈ ಮೂಲಕ ಖಾಕಿ ಟೀಮ್ ನಿಗಾ ಇಡುತ್ತಿದೆ.


ದೇಶದಲ್ಲಿ ಕೊರೊನಾ ಅಬ್ಬರ ಜೋರಾಗಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆಯೂ ಅಧಿಕವಾಗುತ್ತಿದೆ. ಈ ನಡುವೆ, ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಅಗತ್ಯವೇ ಇಲ್ಲದಿದ್ದರೂ ಜನ ಮನೆಯಿಂದ ಹೊರಗೆ ಬರುತ್ತಿರುವುದು ಕೂಡಾ ಸಮಸ್ಯೆಗೆ ಕಾರಣವಾಗುತ್ತಿದೆ. ಹೀಗಾಗಿ, ಎಲ್ಲರೂ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಕಷ್ಟವಾದರೂ ಮನೆಯಲ್ಲಿ ಇರುವುದೇ ಒಳ್ಳೆಯದು. ಆಗ ಮಾತ್ರ ಕೊರೊನಾ ರಕ್ಕಸ ಇನ್ನಷ್ಟು ವ್ಯಾಪಿಸುವುದನ್ನು ತಡೆಯಲು ಸಾಧ್ಯವಾಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ