ಆ್ಯಪ್ನಗರ

ಕುತ್ತಿಗೆ ಮಟ್ಟದ ನೀರಿದ್ದರೂ ಈ ಬೈಕ್‌ನಲ್ಲಿ ಸರಾಗವಾಗಿ ಹೋಗ್ಬಹುದು...!

ಪ್ರವಾಹದ ನೀರು ತುಂಬಿದ ರಸ್ತೆಯಲ್ಲಿ ವಾಹನದಲ್ಲಿ ಸಾಗುವುದೇ ದೊಡ್ಡ ಸವಾಲು. ಆದರೆ, ಇದೇ ರೀತಿ ನೀರು ತುಂಬಿದ ರಸ್ತೆಯಲ್ಲಿ ವಿಶೇಷವಾಗಿ ವಿನ್ಯಾಸಗೊಳಿಸಿದ ಬೈಕ್‌ನಲ್ಲಿ ಸಾಗುವ ಯುವಕರ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Vijaya Karnataka Web 13 Aug 2020, 7:32 pm
ಈಗಂತೂ ಎಲ್ಲಿ ನೋಡಿದರೂ ಮಳೆಯದ್ದೇ ಸುದ್ದಿ. ಮಳೆಯಿಂದಾದ ಅವಾಂತರಗಳದ್ದೇ ಆತಂಕ. ಅದರಲ್ಲೂ ನಗರ ಪ್ರದೇಶಗಳಲ್ಲಿ ಹೆದ್ದಾರಿಗಳು ಕೆರೆಯಂತೆ ಕಾಣಿಸಿಕೊಂಡಿದ್ದೂ ಇದೆ. ಇಂತಹ ರಸ್ತೆಯಲ್ಲಿ ವಾಹನ ಓಡಿಸುವುದು ಸವಾಲಿನ ಕೆಲಸ. ಕೆಲವೊಮ್ಮೆ ನಡುರಸ್ತೆಯಲ್ಲಿ ವಾಹನ ಕೆಟ್ಟು ನಿಲ್ಲುವುದೂ ಇದೆ. ಕೆಲವು ಪ್ರದೇಶಗಳಲ್ಲಿ ಎದೆಮಟ್ಟದಲ್ಲಿ ಪ್ರವಾಹದ ನೀರು ಹರಿಯುವ ಸನ್ನಿವೇಶವೂ ಇದೆ. ಆದರೆ, ಇದಕ್ಕೆಂದೇ ಇಲ್ಲಿ ಯುವಕರು ವಿಶೇಷವಾಗಿ ತಮ್ಮ ಬೈಕ್ ವಿನ್ಯಾಸಗೊಳಿಸಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡುವುದಕ್ಕೆ ಮಾತ್ರ ಕುತೂಹಲಕಾರಿಯಾಗಿದೆ...! ಈ ಕ್ಲಿಪ್‌ನಲ್ಲಿ ಯುವಕರಿಬ್ಬರು ನೀರು ತುಂಬಿದ ಜಾಗದಲ್ಲಿ ತಮ್ಮ ಬೈಕ್‌ನಲ್ಲಿ ಸರಾಗವಾಗಿ ಸಾಗುವ ದೃಶ್ಯವಿದೆ.
Vijaya Karnataka Web Waterlogged Roads
| Screengrab from video | Courtesy : Awanish Sharan/Twitter


Also Read : ಹಕ್ಕಿಗಳಿಗಾಗಿ ತಮ್ಮ ಐಷಾರಾಮಿ ಕಾರಿನ ಬಳಕೆಯನ್ನೇ ನಿಲ್ಲಿಸಿದ ದುಬೈ ಯುವರಾಜ! : ಅಚ್ಚರಿಯ ಕತೆಯಿದು

ಪ್ರವಾಹ ಪೀಡಿತ ಪ್ರದೇಶದಲ್ಲಿ ಇವರು ಬೈಕ್ ಚಲಾಯಿಸುತ್ತಾರೆ. ಎರಡು ಬೈಕ್‌ನಲ್ಲಿ ಇಬ್ಬರು ಸಾಗುವ ದೃಶ್ಯ ಇಲ್ಲಿದೆ. ಅದರಲ್ಲೂ ಕುತ್ತಿಗೆ ಮಟ್ಟದ ನೀರಿನಲ್ಲೂ ಈ ಯುವಕ ಬೈಕ್ ಚಲಾಯಿಸಿದ್ದಾನೆ...! ಇದೇ ಕಾರಣಕ್ಕೆ ಈ ವಿಡಿಯೋ ಈಗ ಎಲ್ಲರ ಗಮನ ಸೆಳೆದಿದೆ.

Also Read : ಅಜ್ಜಿಯ 100ನೇ ಹುಟ್ಟುಹಬ್ಬದಾಚಣೆ : ಮೊಮ್ಮಕ್ಕಳು, ಮರಿಮೊಮ್ಮಕ್ಕಳಿಗೆ ಖುಷಿಯೋ ಖುಷಿ

ಈ ವಿಡಿಯೋವನ್ನು ಐಎಎಸ್ ಅಧಿಕಾರಿ ಅವನೀಶ್ ಶರಣ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. `ಹಿಂದೆಂದೂ ನೋಡಿಲ್ಲ' ಎಂದು ಅವನೀಶ್ ಅವರು ಈ ದೃಶ್ಯದ ಬಗ್ಗೆ ಬರೆದುಕೊಂಡಿದ್ದಾರೆ. ಆದರೆ, ಈ ಬೈಕ್ ವಿನ್ಯಾಸಕ್ಕೆ ಇವರು ಪ್ರಶಂಸೆ ವ್ಯಕ್ತಪಡಿಸಿದರೂ ಇದನ್ನು ಪ್ರಯತ್ನಿಸುವುದು ಅಪಾಯಕಾರಿ ಎಂದೂ ಇವರು ಜನರನ್ನು ಎಚ್ಚರಿಸಿದ್ದಾರೆ. ಖಂಡಿತಾ ಇದು ನಿಜ ಕೂಡಾ. ಯಾಕೆಂದರೆ, ಯುವಕರ ಈ ಪ್ರಯತ್ನ ಮೆಚ್ಚಬೇಕಾದದ್ದೇ. ಆದರೆ, ಇದರ ಸಾಧಕ ಬಾಧಕಗಳೆಷ್ಟು ಎಂಬುದು ಯಾರಿಗೂ ಗೊತ್ತಿಲ್ಲ. ಹೀಗಾಗಿ, ಕೆಲವೊಮ್ಮೆ ಇವುಗಳಿಂದ ಅಪಾಯ ಸಂಭವಿಸಿದರೂ ಅಚ್ಚರಿ ಇಲ್ಲ ಎಂಬುದು ಕೂಡಾ ಸತ್ಯ.

ಇಲ್ಲಿದೆ ವೈರಲ್ ವಿಡಿಯೋ :

Also Read : ವಿದ್ಯುತ್ ಕಂಬವೇರಿ ತಂತಿಗಳನ್ನು ದುರಸ್ತಿ ಮಾಡುವ ಸಾಧಕಿ : ಇದು ಸ್ಫೂರ್ತಿದಾಯಕ ಕತೆ

ಅದೇನೆ ಇದ್ದರೂ ಈ ವಿಡಿಯೋ ಈಗ ಎಲ್ಲರ ಗಮನ ಸೆಳೆದಿದೆ. ಎಲ್ಲರೂ ಈ ಪ್ರಯತ್ನವನ್ನು ಕೊಂಡಾಡಿದ್ದಾರೆ. ಜೊತೆಗೆ, ಇವುಗಳ ಅಪಾಯದ ಬಗೆಗೂ ಕಳವಳ ವ್ಯಕ್ತಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ