ಆ್ಯಪ್ನಗರ

ಈ ಜೇಡನ ಹೆಸರು ಸಚಿನ್ ತೆಂಡೂಲ್ಕರ್...!

ಹೊಸ ರೀತಿಯ ಎರಡು ಜೇಡರ ಹುಳುವನ್ನು ಯುವ ಸಂಶೋಧಕರೊಬ್ಬರು ಪತ್ತೆ ಹಚ್ಚಿದ್ದಾರೆ. ಆದರೆ, ಈ ಜೇಡರ ಹುಳುಗಳಿಗೆ ಇಟ್ಟ ಹೆಸರು ವಿಶ್ವದ ಗಮನ ಸೆಳೆದಿದೆ.

Vijaya Karnataka Web 11 Nov 2019, 9:24 pm
ಸಚಿನ್ ತೆಂಡೂಲ್ಕರ್... ಭಾರತದ ಕ್ರಿಕೆಟ್ ಲೋಕದಲ್ಲಿ ಸದಾ ಮಿನುಗುವ ನಕ್ಷತ್ರ... ಅದೆಷ್ಟೋ ಅಭಿಮಾನಿಗಳ ಪಾಲಿನ ದೇವರಿವರು. ಅದೆಷ್ಟೋ ಜನರಿಗೆ ಸಚಿನ್ ಸ್ಫೂರ್ತಿ. ಸದ್ಯ ಇದೇ ಸಚಿನ್ ಹೊಸ ಜೇಡನ ಹೆಸರಿಗೂ ಸ್ಫೂರ್ತಿಯಾಗಿದ್ದಾರೆ...!
Vijaya Karnataka Web sachin tendulkar
ಸಚಿನ್ ತೆಂಡೂಲ್ಕರ್


ಅಹಮ್ಮದಾಬಾದ್‌ನ ಪರಿಸರ ಮತ್ತು ಶಿಕ್ಷಣ ಸಂಶೋಧನಾ (ಜಿಇಇಆರ್)ಪ್ರತಿಷ್ಠಾನದ ಕಿರಿಯ ಸಂಶೋಧಕ ಧ್ರುವ ಪ್ರಜಾಪತಿ ಎಂಬವರು ಹೊಸದಾದ ಎರಡು ಜೇಡನ ಹುಳುಗಳನ್ನು ಕಂಡು ಹಿಡಿದಿದ್ದಾರೆ. ಪರಿಸರ ಶಿಕ್ಷಣ ವಿಭಾಗದಲ್ಲಿ ಇದು ಮಹತ್ವದ ಸಂಶೋಧನೆ ಎಂದೇ ಬಣ್ಣಿಸಲಾಗಿದೆ. ಸದ್ಯ ಈ ಜೇಡನಿಗೆ ಪ್ರಜಾಪತಿ ಇಟ್ಟ ಹೆಸರು ಈಗ ಎಲ್ಲರ ಗಮನ ಸೆಳೆದಿದ್ದೆ. ಇದರಲ್ಲಿ ಒಂದು ಜೇಡನ ಹೆಸರು `ಮರೆಂಗೋ ಸಚಿನ್ ತೆಂಡೂಲ್ಕರ್' ಮತ್ತು ಇನ್ನೊಂದರದ್ದು `ಇನೋಮರೆಂಗೊ ಚವರಪತೇರಾ'.

Also Read : ಅಚ್ಚರಿಯ ಸ್ನೇಹ : ಶ್ವಾನದೊಂದಿಗೆ ಆಡಿ ಬೆಳೆಯುತ್ತಿದೆ ಚೀತಾ...! : ಇಲ್ಲಿದೆ ವಿಡಿಯೋ


ಅಭಿಮಾನವೇ ಕಾರಣ...
ಸಚಿನ್ ತೆಂಡೂಲ್ಕರ್ ಅವರನ್ನು ಇಷ್ಟಪಡದವರು ಯಾರೂ ಇಲ್ಲ. ವಿಶ್ವದ ಮೂಲೆ ಮೂಲೆಗಳಲ್ಲೂ ಇವರ ಅಭಿಮಾನಿಗಳಿದ್ದಾರೆ. ಸಚಿನ್ ಕ್ರಿಕೆಟ್ ಅಂಗಳದಿಂದ ದೂರವಾಗಿದ್ದರೂ ಇಂದಿಗೂ ಎಲ್ಲರ ಹೃದಯಸಿಂಹಾಸನದಲ್ಲೂ ರಾರಾಜಿಸುತ್ತಿದ್ದಾರೆ. ಸಂಶೋಧಕ ಧ್ರುವ ಪ್ರಜಾಪತಿ ಅವರು ಕೂಡಾ ಸಚಿನ್ ಅವರ ಕಟ್ಟಾ ಅಭಿಮಾನಿ. ಇದೇ ಕಾರಣಕ್ಕೆ ಇವರು ತಮ್ಮ ನೆಚ್ಚಿನ ಆಟಗಾರನ ಹೆಸರನ್ನು ಈ ಜೇಡನಿಗೂ ಇಟ್ಟು ಅಭಿಮಾನ ತೋರಿದ್ದಾರೆ. ಇನ್ನೊಂದು ಜೇಡನ ಹೆಸರಿಗೆ ಸ್ಫೂರ್ತಿಯಾದವರು ಕೇರಳದಲ್ಲಿ ಶಿಕ್ಷಣದ ಜಾಗೃತಿ ಮೂಡಿಸಿದ್ದ ಸಂತ ಕುರಿಯಾಕೋಸ್ ಎಲಿಯಾಸ್ ಚವಾರ. ಸಂತ ಕುರಿಯಾಕೋಸ್ ಎಲಿಯಾಸ್ ಚವಾರ ಅವರ ಸಾಧನೆಯನ್ನು ಕೊಂಡಾಡುವ ಸಲುವಾಗಿ ಪ್ರಜಾಪತಿ ಇವರ ಹೆಸರನ್ನೂ ಇದಕ್ಕೆ ಇಟ್ಟಿದ್ದಾರೆ.

Also Read : ಒಂದು ಜಿರಳೆಯಿಂದ ಮೂರು ಕಾರು ಸುಟ್ಟು ಭಸ್ಮ...!, 31 ಲಕ್ಷ ರೂ. ನಷ್ಟ...! : ಇಲ್ಲಿದೆ ವಿಡಿಯೋ

`ಮರೆಂಗೋ ಸಚಿನ್ ತೆಂಡೂಲ್ಕರ್' ಕೇರಳ, ತಮಿಳುನಾಡು ಮತ್ತು ಗುಜರಾತಿನಲ್ಲಿ ಕಂಡು ಬಂದರೆ, `ಇನೋಮರೆಂಗೊ ಚವರಪತೇರಾ' ಕೇರಳದಲ್ಲಿ ಕಾಣಸಿಕ್ಕಿದೆ. ಹೊಸದಾಗಿ ಪತ್ತೆಯಾದ ಈ ಎರಡು ಜೇಡಗಳು ಏಷ್ಯನ್ ಜಂಪಿಂಗ್ ಜೇಡಗಳ ಇಂಡೊಮರೆಂಗೋ ಮತ್ತು ಮರೆಂಗೋ ಜಾತಿಗೆ ಸೇರಿದ ಜೇಡಗಳಾಗಿವೆ ಎಂದು ಪ್ರಜಾಪತಿ ತಿಳಿಸಿದ್ದಾರೆ.

Also Read : ಮೆದುಳು ತಿನ್ನುವ ಹುಳು...! 15 ವರ್ಷಗಳಿಂದ ವ್ಯಕ್ತಿಯನ್ನು ಕಾಡುತ್ತಿದ್ದ ಹುಳು ಹೊರ ತೆಗೆದ ವೈದ್ಯರು...!

ತನ್ನ ಸ್ನಾತಕೋತ್ತರ ಪದವಿಯ ಭಾಗವಾಗಿ, ಯುವ ಸಂಶೋಧಕ ಗುಜರಾತ್ ವಿಶ್ವವಿದ್ಯಾಲಯದ ಆವರಣದಲ್ಲೇ ಕಂಡುಬರುವ ಸುಮಾರು 78 ವಿಶಿಷ್ಟ ಜಾತಿಯ ಜೇಡಗಳನ್ನು ದಾಖಲಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ