ಆ್ಯಪ್ನಗರ

ಭೂಮಿಯನ್ನೇ ಸಿಡಿಸುವಷ್ಟು ಶಕ್ತಿ ಜಿರಳೆಗಿದೆಯಾ? : ಈ ವಿಡಿಯೋ ನೋಡಿದ್ರೆ ಗೊತ್ತಾಗುತ್ತದೆ!

ಆತ ಜಿರಳೆ ಇದೆ ಎಂದು ಭೂಮಿಗೆ ಬೆಂಕಿ ಹಚ್ಚುತ್ತಾನೆ. ಆದರೆ, ಈ ಬೆಂಕಿಗೆ ಇಡೀ ಜಾಗವೇ ಸಿಡಿಯುತ್ತದೆ...! ಈ ವಿಡಿಯೋ ಈಗ ವೈರಲ್ ಆಗಿದೆ...

Vijaya Karnataka Web 24 Oct 2019, 5:54 pm
ಜಿರಳೆ ಎಂದರೆ ಎಲ್ಲರಿಗೂ ಕಿರಿಕಿರಿಯೇ... ಕೆಲವರಿಗೆ ಇದು ಬರೀ ಕಿರಿಕಿರಿಯಲ್ಲ ಭಯಗೊಳಿಸುವ ಜೀವಿಯೂ ಹೌದು. ಮನೆಯಲ್ಲಿ ಒಂದು ಜಿರಳೆ ಕಂಡರೂ ಹುಲಿ ಬಂದು ಪಕ್ಕದಲ್ಲಿ ನಿಂತಷ್ಟೇ ಟೆನ್ಷನ್‌ ಆಗುತ್ತದೆ. ಈ ಜಿರಳೆಗಳಿಂದ ಆಗುವ ತೊಂದರೆಗಳೂ ಅಷ್ಟಿಷ್ಟಲ್ಲ.
Vijaya Karnataka Web Katsaridaphobia
ಭೂಮಿ ಸಿಡಿಯುವ ದೃಶ್ಯ...! (A screen grab from the viral video.


ಆದರೆ, ಜಿರಳೆಗಳ ಬಗೆಗಿನ ಹೆಚ್ಚು ಭಯ ಒಂದು ಫೋಬಿಯಾವೂ ಹೌದು. ಇದನ್ನು ಕತ್ಸರಿಡಾಫೋಬಿಯಾ ಎಂದೂ ಕರೆಯುತ್ತಾರೆ. ಈ ಫೋಬಿಯಾ ಹೇಗಿರುತ್ತದೆ ಎಂದರೆ ಒಂದು ಜಿರಳೆ ಕಂಡರೂ ಅದನ್ನು ಮುಗಿಸಿ ಬಿಡುವಷ್ಟು ಮನಸ್ಸು ತುಡಿಯುತ್ತಿರುತ್ತದೆ. ಕೆಲವೊಂದು ಅಪರೂಪದ ಪ್ರಕರಣಗಳಲ್ಲಿ ಕೆಲವರು ಜಿರಳೆಯನ್ನು ಕಂಡ ತಕ್ಷಣ ಅಳುವುದು, ಕಿರುಚಾಡುವುದು, ಭಯದಲ್ಲಿ ನಡುಗುತ್ತಾರೆ ಎಂದೂ ಹೇಳಲಾಗುತ್ತದೆ.

Also Read : ಭಜ್ಜಿ ಬೌಲಿಂಗ್ ಶೈಲಿಯ ಅನುಕರಣೆ : ವೈರಲ್ ಆಗಿದೆ ಬಾಲಕಿಯ ವಿಡಿಯೋ

ಹೀಗಾಗಿ, ಮನೆಯಲ್ಲಿ ಒಂದಾದರೂ ಜಿರಳೆ ಕಂಡರೆ ತಕ್ಷಣ ಮನೆಯವರು ಎಲ್ಲವನ್ನೂ ಸ್ವಚ್ಛಗೊಳಿಸಿ ಜಿರಳೆಯನ್ನು ಹೊರಗೆ ಹಾಕುವುದಕ್ಕೆ ನೋಡುತ್ತಾರೆ. ಜಿರಳೆ ಕುಳಿತುಕೊಳ್ಳುವ ರಂಧ್ರಗಳನ್ನೆಲ್ಲಾ ಸ್ವಚ್ಛ ಮಾಡುತ್ತಾರೆ. ಅಂತೆಯೇ, ದಕ್ಷಿಣ ಬ್ರೆಜಿಲ್‌ನ ಸೀಸರ್ ಸ್ಮಿತ್ ಎಂಬವರು ಕೂಡಾ ತಮ್ಮ ಮನೆಯ ಗಾರ್ಡನ್‌ನಲ್ಲಿ ಒಂದಷ್ಟು ಜಿರಳೆ ಕಂಡಿದ್ದರು. ಈ ಜಿರಳೆ ನೋಡಿದ ಮೇಲೆ ಭಯ, ಸಿಟ್ಟು ಎಲ್ಲಾ ನೆತ್ತಿಗೇರಿತ್ತು. ಏನೂ ಮಾಡುವುದು ಎಂದು ಯೋಚಿಸಿದ ಸ್ಮಿತ್‌ ತಲೆಗೆ ಹೊಳೆದದ್ದು ಬೆಂಕಿ ಹಚ್ಚುವ ಯೋಚನೆ...! ಅದರಂತೆಯೇ ಜಿರಳೆಗಳಿದ್ದ ರಂಧ್ರದೊಳಗೆ ಪೆಟ್ರೋಲನ್ನು ಸುರಿದು ಇವರು ಬೆಂಕಿ ಇಟ್ಟಿದ್ದರು...! ಅಷ್ಟೇ... ಮತ್ತೇ ಏನಾಯಿತು ಅಂತ ಈ ವಿಡಿಯೋದಲ್ಲಿ ನೋಡಿ...

Also Read : ಮುಖವೇ ಇಲ್ಲದೆ ಹುಟ್ಟಿತು ಕಂದ...!

video courtesy: shades2

ನೋಡಿದ್ರಲ್ಲಾ...? ರಂಧ್ರಕ್ಕೆ ಬೆಂಕಿ ಹಚ್ಚಿದ ತಕ್ಷಣ ಭೂಮಿ ಸಿಡಿದಿದೆ...! ಬಾಂಬ್ ಸ್ಫೋಟದಂತೆ ಈ ದೃಶ್ಯ ಕಂಡಿದೆ. ಭೂಮಿ ಸಿಡಿದ ದೃಶ್ಯ ಕಂಡು ಸ್ಮಿತ್ ಹೆದರಿ ಓಡಿದ್ದರೆ ಪಕ್ಕದಲ್ಲೇ ಇದ್ದ ಎರಡು ಶ್ವಾನಗಳು ಕೂಡಾ ನಡುಗುತ್ತಿದ್ದವು...! ಈ ಎಲ್ಲಾ ದೃಶ್ಯ ಆ ಮನೆಯಲ್ಲಿದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Also Read : `ನಿದ್ರಿಸಿದ್ದ ಕಂದನ ಪಕ್ಕದಲ್ಲಿ ಮಲಗಿತ್ತು ಮಗುವಿನ ದೆವ್ವ...!'

`ಮನೆಯಲ್ಲಿ ತುಂಬಾ ಜಿರಳೆ ಸಮಸ್ಯೆ ಇತ್ತು. ಹೀಗಾಗಿ, ಜಿರಳೆ ಓಡಿಸಲು ಹಲವು ರಾಸಾಯನಿಕಗಳನ್ನು ಸ್ಪ್ರೇ ಮಾಡಿದ್ದೆವು. ಆದರೂ ಜಿರಳೆ ಸಮಸ್ಯೆ ಕೊನೆಯಾಗಿರಲಿಲ್ಲ. ಹೀಗಾಗಿ, ಗಾರ್ಡನ್‌ನಲ್ಲಿ ಕಂಡಿದ್ದ ಜಿರಳೆಯನ್ನು ಸಾಯಿಸುವಂತೆ ಪತ್ನಿ ತಿಳಿಸಿದ್ದಳು. ಅದರಂತೆ, ನಾನು ಬೆಂಕಿ ಹಚ್ಚಿದೆ' ಎಂದು ಸ್ಮಿತ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ