ಆ್ಯಪ್ನಗರ

ಈ ದೇಗುಲದಲ್ಲಿರುವ ಕಂಬಗಳನ್ನು ಇದುವರೆಗೆ ಯಾರಿಗೂ ಸರಿಯಾಗಿ ಲೆಕ್ಕ ಹಾಕಲು ಸಾಧ್ಯವಾಗಿಲ್ಲ...!

ಈ ಭೂಮಿ ಶ್ರೀಕೃಷ್ಣನ ಬಾಲ್ಯ ಮತ್ತು ಜೀವನಕ್ಕೆ ಸಂಬಂಧಿಸಿದಂತಾಗಿದೆ. ಇಲ್ಲಿ ಯಥೇಚ್ಛವಾಗಿ ತುಳಸಿ ಬೆಳೆಯಲಾಗುತ್ತದೆ. ಈ ತುಳಸಿ ಶ್ರೀಕೃಷ್ಣನಿಗೆ ಬಲು ಪ್ರಿಯ. ಇದೇ ಕಾರಣಕ್ಕೆ ಇದನ್ನು ಆದಿ ಬೃಂದಾವನ ಎಂದೂ ಕರೆಯುವುದಿದೆ.

Vijaya Karnataka Web 15 Jan 2020, 9:30 am
ಇದೊಂದು ಪುರಾತನ ಭವ್ಯ ಕಟ್ಟಡ. ಕೆಲವರು ದೇವಾಲಯ ಅಂತಾರೆ. ಕೆಲವರು ಇದನ್ನು ದರ್ಬಾರ್ ಎಂದು ಕರೆದದ್ದೂ ಇದೆ. ಆದರೆ, ಈ ಭವ್ಯ ಮಂದಿರದ ನಿರ್ಮಾಣದ ರಹಸ್ಯವೇ ದೊಡ್ಡ ಅಚ್ಚರಿ...!
Vijaya Karnataka Web unsolved mystery of chaurasi khamba temple in kaman rajasthan
ಈ ದೇಗುಲದಲ್ಲಿರುವ ಕಂಬಗಳನ್ನು ಇದುವರೆಗೆ ಯಾರಿಗೂ ಸರಿಯಾಗಿ ಲೆಕ್ಕ ಹಾಕಲು ಸಾಧ್ಯವಾಗಿಲ್ಲ...!


ಇತಿಹಾಸದ ರಹಸ್ಯ...

| Representative image | Representative imageImage by Mihir Upadhyay from Pixabay


ತಾಂತ್ರಿಕವಾಗಿ ಈಗ ನಾವೆಷ್ಟಾದರೂ ಮುಂದುವರಿದಿರಬಹುದು. ಟನ್‌ಗಟ್ಟಲೆ ತೂಕದ ಬಂಡೆಯನ್ನೂ ಹೂವಿನಂತೆ ಎತ್ತಿ ಬಿಡುವಂತಹ ಯಂತ್ರಗಳನ್ನು ನಾವು ಕಂಡು ಹಿಡಿದಿರಬಹುದು. ಗಗನಚುಂಬಿ ಕಟ್ಟಡಗಳನ್ನೂ ಕಟ್ಟಿ ನಾವು ಹೆಮ್ಮೆಪಟ್ಟುಕೊಂಡಿರಬಹುದು. ಆದರೆ, ಯಾವುದೇ ನವೀನ ತಂತ್ರಜ್ಞಾನ, ಯಂತ್ರಗಳ ಸಹಾಯವಿಲ್ಲದೆ ನಿರ್ಮಾಣವಾದ ಪುರಾತನ ಕಟ್ಟಡ ಇದೆಯಲ್ವಾ...? ಅದರ ಎದುರು ಕೆಲವೊಮ್ಮೆ ನಮ್ಮ ಈಗಿನ ಸಾಧನೆ ದೊಡ್ಡದೆಂದು ಕಾಣುವುದೇ ಇಲ್ಲ. ಯಾಕೆಂದರೆ, ಪುರಾತನ ಕಾಲದ ನಿರ್ಮಾಣವೇ ಒಂದು ಅಚ್ಚರಿ. ಅದೆಷ್ಟೋ ಸಾವಿರ ವರ್ಷಗಳ ಹಿಂದೆ ನಿರ್ಮಾಣವಾದ ದೇಗುಲ, ಮಹಲ್‌ಗಳು ಈಗಲೂ ಅದೇ ತಾಕತ್ತಿನೊಂದಿಗೆ ಇರುವುದೇ ಇದಕ್ಕೊಂದು ಸಾಕ್ಷಿ. ಇಲ್ಲಿ ಪ್ರತಿಯೊಂದು ನಿರ್ಮಾಣದಲ್ಲೂ ಒಂದೊಂದು ರಹಸ್ಯ, ಒಂದೊಂದು ವಿಶೇಷತೆ, ಒಂದೊಂದು ಅದ್ಭುತಗಳನ್ನು ಬಿಟ್ಟು ಹೋಗಿದ್ದಾರೆ ನಮ್ಮ ಪೂರ್ವಜರು. ಈ ಅದ್ಭುತಗಳನ್ನು ಈಗ ನಿಂತು ನಾವು ನೋಡಿದರೆ ಒಂದು ಕ್ಷಣ ದಂಗಾಗಿ ಹೋಗುತ್ತೇವೆ. ಹಿರಿಯರ ಬುದ್ಧಿಮತ್ತೆ, ವಾಸ್ತುಶಾಸ್ತ್ರದ ಪರಿಣತಿ ನಮ್ಮನ್ನು ಮಂತ್ರಮುಗ್ಧರನ್ನಾಗಿಸುವುದು ದಿಟ. ಇದು ಕೂಡಾ ಅಂತಹದ್ದೇ ಒಂದು ರಹಸ್ಯ.


Also Read : Ghost in Tihar Jail...? : ನಿರ್ಭಯಾ ಹಂತಕರ ಗಲ್ಲು ಶಿಕ್ಷೆಗೆ ಸಿದ್ಧವಾಗುತ್ತಿರುವ ಜೈಲಿನಲ್ಲಿದೆಯಾ ಪ್ರೇತಾತ್ಮಗಳ ಕಾಟ...?

ಶ್ರೀಕೃಷ್ಣನ ಬದುಕಿಗೆ ಹತ್ತಿರವಾದ ಪ್ರದೇಶವಿದು...

| Representative image | image by pexels from pixabay


ಇದೊಂದು ಪುರಾತನ ಕಟ್ಟಡ. ಕೆಲವರು ಇದನ್ನು ದೇವಾಲಯ ಅಂತಾರೆ. ಕೆಲವರ ಪ್ರಕಾರ ಇದು ದರ್ಬಾರ್... ಇಂತಹ ಕಟ್ಟಡ ತನ್ನೊಳಗೆ ಅದೆಷ್ಟೋ ರಹಸ್ಯವನ್ನು ಬಚ್ಚಿಟ್ಟುಕೊಂಡಿದೆ. ಕಾಮನ್ ಅಥವಾ ಕಮಾಬನ್ ಎಂಬುದು ಗತ ಇತಿಹಾಸಕ್ಕೆ ಸಾಕ್ಷಿಯಾಗಿ ನಿಂತಿರುವ ಪಟ್ಟಣ. ಸದ್ಯ ಇದು ರಾಜಸ್ಥಾನದ ಭರತ್‌ಪುರ ಜಿಲ್ಲೆಯ ಉತ್ತರ ದಿಕ್ಕಿನಲ್ಲಿದೆ. ಈ ಭೂಮಿ ಶ್ರೀಕೃಷ್ಣನ ಬಾಲ್ಯ ಮತ್ತು ಜೀವನಕ್ಕೆ ಸಂಬಂಧಿಸಿದಂತಾಗಿದೆ. ಇಲ್ಲಿ ಯಥೇಚ್ಛವಾಗಿ ತುಳಸಿ ಬೆಳೆಯಲಾಗುತ್ತದೆ. ಈ ತುಳಸಿ ಶ್ರೀಕೃಷ್ಣನಿಗೆ ಬಲು ಪ್ರಿಯ. ಇದೇ ಕಾರಣಕ್ಕೆ ಇದನ್ನು ಆದಿ ಬೃಂದಾವನ ಎಂದೂ ಕರೆಯುವುದಿದೆ. ಭದನ್ ಶುಭ ತಿಂಗಳು ಯಾತ್ರೆ ಕೈಗೊಳ್ಳುವ ವೈಷ್ಣವ ಭಕ್ತರು ಇಲ್ಲಿಗೆ ಭೇಟಿ ಕೊಟ್ಟೇ ಕೊಡ್ತಾರೆ. ಮಧ್ಯಕಾಲೀನ ಕಾಲದಲ್ಲಿ ಕಾಮನ್ ಜಾಟ್ ಮತ್ತು ಮೊಘಲರ ಆಡಳಿತಕ್ಕೊಳಪಟ್ಟಿತ್ತು. ಹೀಗಾಗಿ, ಕಾಮನ್‌ನನ್ನು ಮೇವತ್ ಮತ್ತು ಕದಂಬಾವನ ಎಂದೂ ಕರೆಯಲಾಗುತ್ತದೆ.


Also Read : ಭೂಮಿಯಲ್ಲಿ ಇವೆಯಂತೆ ಏಲಿಯನ್ಸ್‌...! ಹೀಗನ್ನುತ್ತಿದ್ದಾರೆ ಬ್ರಿಟನ್‌ನ ಮೊದಲ ಗಗನಯಾತ್ರಿ...!

ಕಂಬಗಳಲ್ಲಿದೆ ಸುಂದರ ಕೆತ್ತನೆ...

photo by varun shiv kapur from new delhi, india, creative commons attribution licence / Times of India


ಇದೊಂದು ಭವ್ಯ ಮಂದಿರ. ಸುತ್ತಮುತ್ತಲಿನ ಜನ ಇದನ್ನು ದೇವಾಲಯ ಎಂದೇ ನಂಬಿದ್ದಾರೆ. ಹಾಗಂತ, ಇಲ್ಲಿ ಯಾವುದೇ ದೇವರ ಮೂರ್ತಿ ಇಲ್ಲ. ಪೂಜೆ, ಉತ್ಸವಗಳೂ ಇಲ್ಲಿ ನಡೆದಿಲ್ಲ. ಆದರೆ, ಇಲ್ಲಿರುವ ಕಂಬಗಳು ಮಾತ್ರ ಭಕ್ತಿಯನ್ನು ಸ್ಫುರಿಸುವಂತಿವೆ. ಒಂದೊಂದು ಕಂಬಗಳಲ್ಲೂ ಅದ್ಭುತ ಕೆತ್ತನೆಗಳಿವೆ. ದೇವಾನುದೇವತೆಗಳ ರೂಪವನ್ನು ಈ ಕಂಬಗಳಲ್ಲಿ ಕಾಣಬಹುದಾಗಿದೆ. ಇದನ್ನು ವಿಕ್ರಮಾದಿತ್ಯನ ದರ್ಬಾರ್‌ನಂತೆಯೂ ನೋಡಲಾಗುತ್ತಿದೆ. ಕಾಮ್ ಸೇನ್ ಇಲ್ಲಿನ ರಾಜನಾಗಿದ್ದ ಸಂದರ್ಭದಲ್ಲಿ ಈ ಪ್ರದೇಶ ಕಾಮ್ಯಾಕ್ ವನ್ ಎಂಬ ಹೆಸರಿನಿಂದ ಪ್ರಚಲಿತವಾಗಿತ್ತು. ಈ ಸಂದರ್ಭದಲ್ಲಿ ಈ ಮಂದಿರ ಅಥವಾ ದರ್ಬಾರನ್ನು ನಿರ್ಮಿಸಿದ್ದಾಗಿ ಉಲ್ಲೇಖವಿದೆ.


Also Read : ಈ ಪುರಾತನ ಕಟ್ಟಡದಲ್ಲಿ ಬಾಗಿಲುಗಳು ಎಷ್ಟಿವೆಯೆಂದು ಲೆಕ್ಕ ಹಾಕಲು ಸಾಧ್ಯವಿಲ್ಲವಂತೆ...!

ಕಂಬಗಳು ಲೆಕ್ಕಕ್ಕೇ ಸಿಗುತ್ತಿಲ್ಲ...!

photo by varun shiv kapur from new delhi, india, creative commons attribution licence / Times of India


ಈ ದೇಗುಲ ಅಥವಾ ದರ್ಬಾರ್‌ನಲ್ಲಿ ಕಂಬಗಳೇ ವಿಶಿಷ್ಟವಾಗಿದ್ದು. ಇಲ್ಲಿನ ಒಂದೊಂದು ಕಂಬಗಳಲ್ಲೂ ಅದ್ಭುತ ಕೆತ್ತನೆಗಳಿವೆ. ಪುರಾತನ ಕಾಲದ ವಾಸ್ತುಶಿಲ್ಪ, ಕುಸುರಿ ಕೆತ್ತನೆಗೆ ಸಾಕ್ಷಿ ಇಲ್ಲಿನ ಕಂಬಗಳು. ಅದೂ ಅಲ್ಲದೆ, ಇಲ್ಲಿ ಇನ್ನೊಂದು ವಿಶೇಷತೆ ಇದೆ. ಅದೇನೆಂದರೆ, ಈ ಮಂದಿರದಲ್ಲಿ 84 ಕಂಬಗಳು ಇವೆ ಎಂಬುದು ನಂಬಿಕೆ. ಹೀಗಾಗಿಯೇ ಇದನ್ನು ಚೌರಾಸಿ ಕಂಬ ಟೆಂಪಲ್ ಅಥವಾ ಚೌರಾಸಿ ಕಂಬ ಮಂದಿರ ಎಂದೂ ಕರೆಯುಲಾಗುತ್ತದೆ. ಚೌರಾಸಿ ಎಂದರೆ 84 ಎಂದರ್ಥ. ಆದರೆ, ಇದುವರೆಗೆ ಈ ಕಂಬಗಳನ್ನು ಲೆಕ್ಕ ಹಾಕಲು ಸಾಧ್ಯವಾಗಿಲ್ಲ. ಜೊತೆಗೆ, ಎಷ್ಟೇ ಲೆಕ್ಕ ಹಾಕಿದರೂ 84 ಬಿಟ್ಟು ಎಲ್ಲಾ ಸಂಖ್ಯೆ ಬರುತ್ತದೆ. ಕೆಲವೊಮ್ಮೆ 89, 103,101 ಹೀಗೆ ಒಬ್ಬೊಬ್ಬರು ಲೆಕ್ಕ ಹಾಕಿದಾಗ ಇಲ್ಲಿ ಒಂದೊಂದು ಸಂಖ್ಯೆ ಸಿಗುತ್ತದೆಯಂತೆ. ಹೀಗಾಗಿ, ಇದುವರೆಗೆ ಈ ದೇಗುಲದ ಕಂಬಗಳನ್ನು ಲೆಕ್ಕವನ್ನು ನಿಖರವಾಗಿ ಯಾರಿಗೂ ಲೆಕ್ಕ ಇಡಲು ಸಾಧ್ಯವಾಗಿಲ್ಲ. ಪರಿಣಾಮ ಈ ಭವ್ಯ ಮಂದಿರ ಕುತೂಹಲದ ತಾಣವಾಗಿದೆ. ಎಷ್ಟು ಸಲ ಲೆಕ್ಕ ಹಾಕಿದರೂ ಒಮ್ಮೆ ಲೆಕ್ಕ ಮಾಡಿದಾಗ ಸಿಗುವ ಸಂಖ್ಯೆ ಇನ್ನೊಂದು ಸಲ ಸಿಗುವುದಿಲ್ಲ ಎನ್ನುತ್ತಾರೆ ಈ ಮಂದಿರ ಬಗ್ಗೆ ತಿಳಿದವರು. ಕುತೂಹಲಕ್ಕೆಂದು ಇಲ್ಲಿಗೆ ಬರುವ ಪ್ರವಾಸಿಗರೂ ಈ ಕಂಬಗಳನ್ನು ಲೆಕ್ಕ ಹಾಕುವ ಸಾಹಸ ಮಾಡಿದ್ದೂ ಇದೆ. ಆದರೆ, ಯಾರೊಬ್ಬರಿಗೂ ಕಂಬದ ಲೆಕ್ಕ ಸರಿಯಾಗಿ ಸಿಕ್ಕಿಲ್ಲವಂತೆ.

84 ಸಂಖ್ಯೆಗೆ ಇಲ್ಲಿ ಬಲು ಮಹತ್ವ...

| Representative image | image by wolfgang barth from pixabay


ಕಾಮನ್ ಪ್ರದೇಶದಲ್ಲಿ 84 ಸಂಖ್ಯೆಗೆ ಬಲು ಮಹತ್ವ. ಯಾಕೆಂದರೆ, ಇಲ್ಲಿ 84 ಕುಂಡಗಳು, 84 ದೇವಾಲಯಗಳು ಮತ್ತು 84 ಹೆಕ್ಟೇರ್ ಭೂಮಿಯನ್ನು 84 ಸಣ್ಣ ಕೊಳಗಳಾಗಿ ಪರಿವರ್ತಿಸಲಾಗಿದೆ. ಈ ಮಂದಿರದಲ್ಲೂ 84 ಕಂಬಗಳಿವೆ ಎಂಬುದು ಜನರ ನಂಬಿಕೆ. ಶ್ರೀಕೃಷ್ಣ ತನ್ನ ಬಾಲ್ಯದ ಕೆಲ ದಿನಗಳನ್ನು ಇಲ್ಲೇ ಕಳೆದಿದ್ದಾಗಿ ಐತಿಹ್ಯಗಳು ತಿಳಿಸುತ್ತವೆ. ಜೊತೆಗೆ, ಪಾಂಡವರ ಹೆಸರೂ ಇಲ್ಲಿ ಕೇಳಿ ಬರುತ್ತಿದೆ. ಅಜ್ಞಾತವಾಸದ ಸಂದರ್ಭದಲ್ಲಿ ಪಾಂಡವರು ಇಲ್ಲಿಗೆ ಬಂದಿದ್ದರಂತೆ. ಇದಕ್ಕೆ ಪೂರಕವೆಂಬಂತೆ ಇಲ್ಲೇ ಒಂದು ಜಲಕುಂಡವಿದ್ದು, ಇದಕ್ಕೆ ಧರ್ಮರಾಯ ಕುಂಡ ಎಂಬ ಹೆಸರಿದೆ. ಅದೂ ಅಲ್ಲದೆ, ರಾಜ ವಿಕ್ರಮಾದಿತ್ಯ ಇಲ್ಲಿ ತನ್ನ ದರ್ಬಾರ್ ನಡೆಸಿದ್ದಾಗಿಯೂ ಕೆಲವರು ಹೇಳುತ್ತಾರೆ. ಹೀಗೆ, ಐತಿಹಾಸಿಕ ಮತ್ತು ಪೌರಾಣಿಕವಾಗಿ ಈ ಜಾಗಕ್ಕೆ ಅತೀ ಮಹತ್ವವಿದೆ. ಇದೇ ಕಾರಣಕ್ಕೆ ಪ್ರತಿದಿನ ಹಲವಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿ ಈ ಕಂಬದ ಅಚ್ಚರಿಯನ್ನು ಕಣ್ತುಂಬಿಕೊಳ್ಳುತ್ತಾರೆ. ನಿಜಕ್ಕೂ ಈ ಮಂದಿರದ ನಿರ್ಮಾಣದ ಪ್ರಕ್ರಿಯೆಯಲ್ಲೇ ರಹಸ್ಯ ಅಡಗಿದೆ. ಆದರೆ, ನಿಜವಾಗಿಯೂ ಇಲ್ಲಿ 84 ಕಂಬಗಳು ಇವೆಯಾ...? ಇಲ್ಲಿ ನಿಜವಾಗಿ ಇರುವ ಕಂಬಗಳೆಷ್ಟು...? ಒಬ್ಬೊಬ್ಬರಿಗೆ ಒಂದೊಂದು ಕಂಬದ ಲೆಕ್ಕ ಸಿಗುವುದು ಹೇಗೆ...? ಎಂಬ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿದೆ. ಹೀಗಾಗಿ, ಇಲ್ಲಿನ ರಹಸ್ಯವನ್ನು ತಿಳಿದುಕೊಳ್ಳುವ ಪ್ರಯತ್ನ ಆಗಬೇಕಾಗಿದೆ. ವೈಜ್ಞಾನಿಕವಾಗಿ ಈ ಕಟ್ಟಡ ನಿರ್ಮಾಣದ ರೀತಿಯನ್ನು ಅಧ್ಯಯನ ಮಾಡಿದರೆ ಈ ಸತ್ಯವನ್ನು ಕಂಡುಕೊಳ್ಳಬಹುದೇನೋ...

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ