ಲೂಸ್ ಮಾದ ಯೋಗಿ ಹೀರೋ ಆಗಿ ನಟಿಸಿದ 'ನಂದ ಲವ್ಸ್ ನಂದಿತಾ', ಮಾಲಾಶ್ರೀ ನಟನೆಯ 'ಮಹಾಕಾಳಿ', ಶಿವರಾಜ್ಕುಮಾರ್ ನಾಯಕತ್ವದ 'ಭಾಗ್ಯದ ಬಳೆಗಾರ' ಹಾಗೂ ವಿನೋದ್ ಪ್ರಭಾಕರ್ ನಟನೆಯ 'ಮರಿಟೈಗರ್' ಸೇರಿದಂತೆ ಸ್ಯಾಂಡಲ್ವುಡ್ನಲ್ಲಿ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿರುವ ನಿರ್ಮಾಪಕ ಡಾ. ರಮೇಶ್ ಕಶ್ಯಪ್ ಅವರ ಪುತ್ರಿ ಸುರಭಿ ಆರ್. ಕಶ್ಯಪ್ ಅವರ ವಿವಾಹವು ಸುಜಯ್ ಒಡೆಯರ್ ಅವರೊಂದಿಗೆ ಇತ್ತೀಚೆಗೆ ಮೈಸೂರು ರಸ್ತೆಯ ಪೂರ್ಣಿಮ ಪ್ಯಾಲೇಸ್ ಕಲ್ಯಾಣ ಮಂಟಪದಲ್ಲಿ ನೆರವೇರಿತು. ಈ ಮದುವೆಗೆ ಸ್ಯಾಂಡಲ್ವುಡ್ನ ಅನೇಕರು ಭಾಗಿಯಾಗಿ, ನೂತನ ಜೋಡಿಗೆ ಹಾರೈಸಿದರು. ಹಿರಿಯ ನಟಿ ಜಯಂತಿ, ನಿರ್ಮಾಪಕರಾದ ಸಾ.ರಾ.ಗೋವಿಂದು, ಕೆ.ಸಿ.ಎನ್ ಚಂದ್ರಶೇಖರ್, ಉಮೇಶ್ ಬಣಕಾರ್, ಕೆ.ಪಿ.ಶ್ರೀಕಾಂತ್ ನಟರಾದ 'ದುನಿಯಾ' ವಿಜಯ್, ಧ್ರುವ ಸರ್ಜಾ, 'ಗಟ್ಟಿಮೇಳ' ಧಾರಾವಾಹಿ ಖ್ಯಾತಿಯ ರಕ್ಷ್ ಗೌಡ, ಹಿರಿಯ ನಟ ಬ್ಯಾಂಕ್ ಜನಾರ್ದನ್, ಅರವಿಂದ್ (ರಥಸಪ್ತಮಿ) ಮುಂತಾದವರು ವಿವಾಹ ಮಹೋತ್ಸವಕ್ಕೆ ಆಗಮಿಸಿದ್ದರು.