ಕನ್ನಡ ಕಿರುತೆರೆ ಸಾಕಷ್ಟು ಜನರ ಮೆಚ್ಚುಗೆ ಗಳಿಸಿದೆ. ಅನೇಕ ಯಶಸ್ವಿ ಧಾರಾವಾಹಿ, ರಿಯಾಲಿಟಿ ಶೋ, ಕಾರ್ಯಕ್ರಮಗಳು ಬೇರೆ ಬೇರೆ ವಾಹಿನಿಗಳಲ್ಲಿ ಪ್ರಸಾರವಾಗಿವೆ. ಈಗಾಗಲೇ ಸಾಕಷ್ಟು ಕಲಾವಿದರು ಕಿರುತೆರೆಯಲ್ಲಿ ಮಿಂಚಿ ಸಾಕಷ್ಟು ಜನಪ್ರಿಯತೆ ಗಳಿಸಿದ್ದಾರೆ. ಇನ್ನೂ ಕೆಲ ಕಲಾವಿದರು ಹಲವಾರು ವರ್ಷಗಳಿಂದ ಕಿರುತೆರೆ, ಬೆಳ್ಳಿತೆರೆ ಎರಡರಲ್ಲೂ ಸಕ್ರಿಯರಾಗಿದ್ದಾರೆ. ಇನ್ನು ಕೆಲ ನಟಿಯರು ಸಾಕಷ್ಟು ಪ್ರಖ್ಯಾತಿ ಗಳಿಸಿದ್ದರೂ ಕೂಡ, ವಿವಿಧ ವೈಯಕ್ತಿಕ ಕಾರಣಗಳಿಗೆ ಸದ್ಯ ಧಾರಾವಾಹಿಯಿಂದ ತೊರೆದಿದ್ದಾರೆ. ರಾಧಾ ರಮಣ ಧಾರಾವಾಹಿ, ಶ್ರೀರಸ್ತು ಶುಭಮಸ್ತು ಧಾರಾವಾಹಿ ನಟಿ ಶ್ವೇತಾ ಆರ್ ಪ್ರಸಾದ್, 'ಜೊತೆ ಜೊತೆಯಲಿ', 'ರಾಧಾ ರಮಣ' ಸೀರಿಯಲ್ ನಟಿ ಆಶಿತಾ ಚಂದ್ರಪ್ಪ, 'ಮಜಾ ಟಾಕೀಸ್' ಖ್ಯಾತಿಯ ಶ್ವೇತಾ ಚೆಂಗಪ್ಪ, 'ಬೆಂಕಿಯಲ್ಲಿ ಅರಳಿದ ಹೂವು', 'ನಂದಿನಿ' ಸೀರಿಯಲ್ ನಟಿ ನಿತ್ಯಾ ರಾಮ್, 'ಚಿಟ್ಟೆ ಹೆಜ್ಜೆ' ಸೀರಿಯಲ್ ಖ್ಯಾತಿಯ ನಯನಾ ಪುಟ್ಟಸ್ವಾಮಿ ಮುಂತಾದವರು ಸದ್ಯ ನಟನೆಯಿಂದ ದೂರಸರಿದಿದ್ದಾರೆ.