'ತಾಯ್ತ' ಚಿತ್ರೀಕರಣ: 'ಚಿಕ್ಕಮಗಳೂರಿನ ಚಿಕ್ಕಮಲ್ಲಿಗೆ'ಯಾದ ಹರ್ಷಿಕಾ ಪೂಣಚ್ಚ

Vijaya Karnataka Web 23 Aug 2021, 8:59 am
  • ಚಿಕ್ಕಮಗಳೂರಿನಲ್ಲಿ 'ತಾಯ್ತ' ಶೂಟಿಂಗ್

    ಕನ್ನಡದ ಜನಪ್ರಿಯ ಹಾಸ್ಯನಟ ಸಾಧುಕೋಕಿಲ ಅವರ ಸಹೋದರ ಲಯ ಕೋಕಿಲ ನಿರ್ದೇಶನ ಮಾಡುತ್ತಿರುವ ಸಿನಿಮಾ 'ತಾಯ್ತ'. ಇದೇ ಮೊದಲ ಬಾರಿಗೆ ಲಯ ಕೋಕಿಲ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. 'ತಾಯ್ತ' ಚಿತ್ರಕ್ಕೆ ಈಗಾಗಲೇ ಭರ್ಜರಿ ಚಾಲನೆ ನೀಡಲಾಗಿದೆ. 'ತಾಯ್ತ' ಚಿತ್ರದ ಮೂಲಕ ನಾಯಕನಾಗಿ ರಿಹಾನ್ ಎಂಬ ಹೊಸ ಪ್ರತಿಭೆ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಡುತ್ತಿದ್ದಾರೆ. ಅವರಿಗೆ ನಾಯಕಿಯಾಗಿ ಹರ್ಷಿಕಾ ಪೂಣಚ್ಚ ಅಭಿನಯಿಸುತ್ತಿದ್ದಾರೆ. ಉಳಿದ ತಾರಾಬಳಗದಲ್ಲಿ ಸುಮಾ ಶಾಸ್ತ್ರೀ, ಡಾ.ಶಾಹಿದ್, ಶೋಭರಾಜ್, ಕಲೀಲ್, ಮಿಮಿಕ್ರಿ ಮಂಜು, ಕಾರ್ತಿಕ್ ಶರ್ಮಾ ಮುಂತಾದವರಿದ್ದಾರೆ. ಬಹಳ ವಿಭಿನ್ನವಾದ ಕಥಾಹಂದರ ಹೊಂದಿರುವ 'ತಾಯ್ತ' ಚಿತ್ರಕ್ಕೆ ನಿರ್ಮಾಪಕ ಡಾ.ಶಾಹಿದ್ ಅವರೇ ಕಥೆ ಬರೆದಿದ್ದಾರೆ. ನಿರ್ದೇಶನದ ಜೊತೆಗೆ ಚಿತ್ರಕ್ಕೆ ಲಯ ಕೋಕಿಲ ಸಂಗೀತ ನೀಡುತ್ತಿದ್ದಾರೆ. ಸದ್ಯ 'ತಾಯ್ತ' ಚಿತ್ರದ ಹಾಡುಗಳ ಚಿತ್ರೀಕರಣ ನಡೆಯುತ್ತಿದೆ. ಚಿಕ್ಕಮಗಳೂರಿನಲ್ಲಿ ಹಾಡುಗಳ ಶೂಟಿಂಗ್ ಬಿರುಸಿನಿಂದ ಸಾಗುತ್ತಿದೆ. ನೃತ್ಯ ಸಂಯೋಜಕರಾದ ಮದನ್ ಹರಿಣಿ ಕೊರಿಯೋಗ್ರಫಿಯಲ್ಲಿ ನಾಯಕಿ ಹರ್ಷಿಕಾ ಪೂಣಚ್ಚ ಮತ್ತು ನಾಯಕ ರಿಹಾನ್ ಹೆಜ್ಜೆ ಹಾಕಿದ್ದಾರೆ. ಚಿಕ್ಕಮಗಳೂರಿನಲ್ಲಿ ನಡೆದ 'ತಾಯ್ತ' ಚಿತ್ರದ ಶೂಟಿಂಗ್ ಫೋಟೋಗಳನ್ನು ಕೊಡಗಿನ ಕುವರಿ ಹರ್ಷಿಕಾ ಪೂಣಚ್ಚ ಹಂಚಿಕೊಂಡಿದ್ದಾರೆ.

  • ಚಿಕ್ಕಮಗಳೂರಿನಲ್ಲಿ ನಡೆದಿದೆ 'ತಾಯ್ತ' ಚಿತ್ರದ ಹಾಡುಗಳ ಚಿತ್ರೀಕರಣ

  • ಹಾಡುಗಳಿಗೆ ಮದನ್ ಹರಿಣಿ ನೃತ್ಯ ಸಂಯೋಜನೆ

  • ಲಯ ಕೋಕಿಲ ನಿರ್ದೇಶನದ ಚೊಚ್ಚಲ ಚಿತ್ರ 'ತಾಯ್ತ'

  • ಇನ್ನಷ್ಟು ಚಿತ್ರಗಳುಡೌನ್‌ಲೋಡ್‌ ಆ್ಯಪ್‌
  • ವಿಭಿನ್ನ ಲುಕ್‌ನಲ್ಲಿ ಹರ್ಷಿಕಾ ಪೂಣಚ್ಚ

  • ಹರ್ಷಿಕಾ ಪೂಣಚ್ಚ ಜೊತೆಗೆ ಹೆಜ್ಜೆ ಹಾಕಿದ ನಟ ರಿಹಾನ್

  • ಕೊರಿಯೋಗ್ರಾಫರ್ ಹರಿಣಿಗೆ ಸಿಹಿ ಮುತ್ತು ಕೊಟ್ಟ ಹರ್ಷಿಕಾ

  • ಕೊರಿಯೋಗ್ರಾಫರ್ ಮದನ್ ಹರಿಣಿ ಜೊತೆಗೆ ಹರ್ಷಿಕಾ

  • ಹಾಡುಗಳಿಗೆ ಸಂಗೀತ ನೀಡಿದ್ದಾರೆ ಲಯ ಕೋಕಿಲ