ರಾಜರಾಜೇಶ್ವರಿ ನಗರ ಉಪಚುನಾವಣೆ: ನಟ ವಿನೋದ್ ಪ್ರಭಾಕರ್ ಮನೆಗೆ ಭೇಟಿಕೊಟ್ಟು ಊಟ ಸವಿದ ಡಿಕೆ ಶಿವಕುಮಾರ್!

Vijaya Karnataka Web 23 Oct 2020, 6:51 pm
  • ನಟ ವಿನೋದ್ ಪ್ರಭಾಕರ್ ಮನೆಗೆ ಭೇಟಿಕೊಟ್ಟು ಊಟ ಸವಿದ ಡಿಕೆ ಶಿವಕುಮಾರ್!

    ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ರಾಜರಾಜೇಶ್ವರಿ ನಗರದಲ್ಲಿರುವ ಚಿತ್ರನಟ ವಿನೋದ್ ಪ್ರಭಾಕರ್ ಅವರ ನಿವಾಸಕ್ಕೆ ಶುಕ್ರವಾರ ಭೇಟಿ ನೀಡಿ ಮಾತುಕತೆ ನಡೆಸಿ, ಅವರ ಮನೆಯಲ್ಲೇ ಮಧ್ಯಾಹ್ನದ ಊಟ ಸವಿದರು. ಈ ವೇಳೆ ಶ್ರೀಮತಿ ವಿನೋದ್ ಪ್ರಭಾಕರ್ ಅವರು ಇದ್ದರು. ರಾಜರಾಜೇಶ್ವರಿ ನಗರದಲ್ಲಿ ಚುನಾವಣೆ ಇರುವ ಕಾರಣಕ್ಕಾಗಿ ಅವರು ವಿನೋದ್ ಪ್ರಭಾಕರ್ ಮನೆಗೆ ತೆರಳಿ ಮತಯಾಚನೆ ಮಾಡಿದ್ದಾರೆ. ಅದರ ಜೊತೆಗೆ ನಿಮ್ಮ ಬಂಧು-ಬಳಗ, ಅಭಿಮಾನಿಗಳಿಗೂ ಕೂಡ ನಮಗೆ ಮತ ಹಾಕುವಂತೆ ಹೇಳಿ ಎಂದು ಡಿಕೆಶಿ ಅವರು ವಿನೋದ್‌ಗೆ ಹೇಳಿದ್ದಾರೆ. ಮಧ್ಯಾಹ್ನದ ಸಮಯಕ್ಕೆ ವಿನೋದ್ ಪ್ರಭಾಕರ್ ಮನೆಗೆ ಡಿಕೆ ಶಿವಕುಮಾರ್ ಭೇಟಿ ನೀಡಿದ್ದಕ್ಕಾಗಿ ಅವರ ಮನೆಯಲ್ಲಿಯೇ ಊಟ ಮಾಡಿದ್ದಾರೆ. ವಿನೋದ್ ಪ್ರಭಾಕರ್ ದಂಪತಿ ಡಿಕೆಶಿ ಅವರಿಗೆಂದೇ ವಿಶೇಷ ಭೋಜನ ತಯಾರಿಸಿದ್ದರಂತೆ. ಇನ್ನು ನಟ ನೆನಪಿರಲಿ ಪ್ರೇಮ್ ಅವರ ಮನೆಗೂ ಕೂಡ ಡಿಕೆಶಿ ಭೇಟಿ ನೀಡಿದ್ದರು.

  • ಡಿಕೆಶಿ ಜೊತೆ ವಿನೋದ್ ಪ್ರಭಾಕರ್

  • ವಿನೋದ್ ಮನೆಯಲ್ಲಿ ಡಿಕೆಶಿ, ಬೆಂಬಲಿಗರ ಊಟ

  • ಡಿಕೆಶಿ ಜೊತೆ ವಿನೋದ್ ದಂಪತಿ

  • ಇನ್ನಷ್ಟು ಚಿತ್ರಗಳುಡೌನ್‌ಲೋಡ್‌ ಆ್ಯಪ್‌
  • ಡಿಕೆಶಿಗೆ ಹೂಗುಚ್ಛ ಕೊಟ್ಟು ಸ್ವಾಗತಿಸಿದ ವಿನೋದ್ ದಂಪತಿ

  • ಮಧ್ಯಾಹ್ನದ ವೇಳೆ ವಿನೋದ್ ಮನೆಗೆ ಬಂದಿದ್ದ ಡಿಕೆಶಿ

  • ವಿನೋದ್ ಮನೆಯಲ್ಲಿ ಮತಯಾಚನೆ ಮಾಡಿದ ಡಿಕೆ ಶಿವಕುಮಾರ್

  • ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವಂತೆ ಡಿಕೆಶಿ ಮನವಿ

  • ಸಹಜವಾಗಿ ಮಾತುಕತೆ ಮಾಡಿದ ಡಿಕೆಶಿ-ವಿನೋದ್

  • ಡಿಕೆಶಿಗೆ ಊಟ ಬಡಿಸಿದ ವಿನೋದ್

  • ಡಿಕೆಶಿಗೆ ಭರ್ಜರಿ ಸ್ವಾಗತ ಕೋರಿದ ವಿನೋದ್ ದಂಪತಿ