ಪ್ರತಿಷ್ಠಿತ ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಅದ್ದೂರಿಯಾಗಿ ತೆರೆ ಬಿದ್ದಿದೆ. ಹೈದರಾಬಾದ್ನಲ್ಲಿ ಸೆ.18 ಮತ್ತು ಸೆ.19ರಂದು ಆಯೋಜನೆಗೊಂಡಿದ್ದ ಈ ಅದ್ದೂರಿ ಕಾರ್ಯಕ್ರಮಕ್ಕೆ ದಕ್ಷಿಣ ಭಾರತದ ಖ್ಯಾತನಾಮ ತಾರೆಯರೆಲ್ಲ ಭಾಗವಹಿಸಿದ್ದರು. ಅದರಲ್ಲೂ ಕೊನೆಯ ದಿನದ ಕಾರ್ಯಕ್ರಮದಲ್ಲಿ 'ಮೆಗಾ ಸ್ಟಾರ್' ಚಿರಂಜೀವಿ, ಅಲ್ಲು ಅರ್ಜುನ್, ಖುಷ್ಬೂ ಸುಂದರ್, ಸುಹಾಸಿನಿ ಅವರಂತಹ ಘಟಾನುಘಟಿ ತಾರೆಯರು ಹಾಜರಿ ಹಾಕಿ ಕಾರ್ಯಕ್ರಮದ ಮೆರುಗು ಹೆಚ್ಚಿಸಿದರು. ಸೆ.19ರಂದು 2020ರಲ್ಲಿ ತೆರೆಕಂಡ ಸಿನಿಮಾಗಳಿಗೆ ಪ್ರಶಸ್ತಿ ನೀಡಲಾಗಿದೆ. ಅದರಲ್ಲೂ ತೆಲುಗಿನ 'ಅಲಾ ವೈಕುಂಠಪುರಮುಲೋ' ಚಿತ್ರಕ್ಕೆ ಬರೋಬ್ಬರಿ 10 ಪ್ರಶಸ್ತಿಗಳು ಲಭಿಸಿವೆ. ಚಿತ್ರದಲ್ಲಿನ ನಟನೆಗಾಗಿ ಅಲ್ಲು ಅರ್ಜುನ್, ಪೂಜಾ ಹೆಗ್ಡೆ, ಮುರಳಿ ಶರ್ಮಾ, ಸಮುದ್ರಖಣಿಗೆ ಪ್ರಶಸ್ತಿ ಸಿಕ್ಕಿವೆ. ಚಿತ್ರದ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್, ಗಾಯಕ ಅರ್ಮಾನ್ ಮಲಿಕ್, ಸಂಗೀತ ನಿರ್ದೇಶಕ ಥಮನ್ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಯಾರೆಲ್ಲ ಭಾಗವಹಿಸಿದ್ದರು? ಇಲ್ಲಿವೆ ಎಕ್ಸ್ಕ್ಲೂಸಿವ್ ಫೋಟೋಗಳು