ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ‘ವಿಕ್ರಾಂತ್ ರೋಣ’ ಸಿನಿಮಾ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಅನೂಪ್ ಭಂಡಾರಿ ನಿರ್ದೇಶನದ ‘ವಿಕ್ರಾಂತ್ ರೋಣ’ ಚಿತ್ರಕ್ಕೆ ಪ್ರೇಕ್ಷಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹೀಗಿರುವಾಗಲೇ, ದುಬೈ ಅನಿವಾಸಿ ಕನ್ನಡಿಗರಿಗೆ ಕಿಚ್ಚ ಸುದೀಪ್ ಮತ್ತು ಬ್ಲಾಕ್ ಟಿಕೆಟ್ಸ್ ತಂಡ ವಿಶೇಷ ಉಡುಗೊರೆಗಳನ್ನು ನೀಡಿದೆ. ಹಾಗ್ನೋಡಿದ್ರೆ, ಜುಲೈ 27 ರಂದು ಸಂಜೆ 7 ಗಂಟೆಗೆ ದುಬೈನಲ್ಲಿ ‘ವಿಕ್ರಾಂತ್ ರೋಣ’ ಚಿತ್ರದ ಪ್ರೀಮಿಯರ್ ಶೋ ನಡೆದಿತ್ತು. ದುಬೈನಲ್ಲಿನ ಅನಿವಾಸಿ ಕನ್ನಡಿಗರು ‘ವಿಕ್ರಾಂತ್ ರೋಣ’ ಚಿತ್ರಕ್ಕೆ ಭರ್ಜರಿ ಬೆಂಬಲ ನೀಡಿದ್ದರು. ಈಗ ದುಬೈ ಅನಿವಾಸಿ ಕನ್ನಡಿಗರಿಗೆ ಕಿಚ್ಚ ಕ್ರಿಯೇಷನ್ಸ್ ಹಾಗೂ ಬ್ಲಾಕ್ ಟಿಕೆಟ್ಸ್ ವತಿಯಿಂದ ಸುದೀಪ್ ಹಸ್ತಾಕ್ಷರ ಇರುವ ಟಿ-ಶರ್ಟ್, ಬುಕ್, ಕಾಫಿ ಮಗ್ ಉಡುಗೊರೆಯಾಗಿ ಸಿಕ್ಕಿದೆ.