ಚಿತ್ರ ಸುದ್ದಿ

Vijaya Karnataka Web 7 Mar 2020, 3:19 pm
  • ಜಿಮ್‌ನಲ್ಲಿ ಜಾಹ್ನವಿ ಕಪೂರ್

    ಫಿಟ್‌ನೆಸ್ ಬಗ್ಗೆ ತುಂಬಾ ಕಾಳಜಿ ಹೊಂದಿರುವ ನಟಿ ಜಾಹ್ನವಿ ಕಪೂರ್ ಜಿಮ್‍ ಒಂದರ ಬಳಿ ಕಾಣಿಸಿಕೊಂಡಿದ್ದು ಹೀಗೆ.

  • ಬಳ್ಳಾರಿ: ಕನಕ ದುರ್ಗಮ್ಮ ಸಿಡಿ ಬಂಡಿ ಉತ್ಸವದಲ್ಲಿ ಭಕ್ತ ಸಾಗರ

    ಬಳ್ಳಾರಿ ನಗರದ ಆದಿದೇವತೆ ಕನಕ ದುರ್ಗಮ್ಮ ದೇವಸ್ಥಾನ ಸಿಡಿ ಬಂಡಿ ಉತ್ಸವ ಲಕ್ಷಾಂತರ ಭಕ್ತರ ನಡುವೆ ನಡೆಯಿತು.

  • ರಾಜ್ಯಾದ್ಯಂತ ಮಾರ್ದನಿಸಿದ ಓಂ ನಮಃ ಶಿವಾಯ

    ಬೆಂಗಳೂರಿನ ಹಳೇ ವಿಮಾನ ನಿಲ್ದಾಣ ರಸ್ತೆಯ ದೇವಾಲಯದಲ್ಲಿ ಶಿವನ ದರ್ಶನಕ್ಕೆ ಭಕ್ತರ ಸಾಲು

  • ಅರಮನೆ ನಗರಿಯಲ್ಲಿ “ವಿಂಟರ್ ಫೆಸ್ಟಿವಲ್”

    ಮೈಸೂರು “ಮಾಗಿ ಉತ್ಸವ” ಮತ್ತೆ ಬಂದಿದೆ. ಅಂಬಾವಿಲಾಸ ಅರಮನೆ ಆವರಣದಲ್ಲಿ ಅದ್ಧೂರಿಯಾಗಿ ನಡೆಯುತ್ತಿದೆ.

  • ಇನ್ನಷ್ಟು ಚಿತ್ರಗಳುಡೌನ್‌ಲೋಡ್‌ ಆ್ಯಪ್‌
  • ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಫ್ಲವರ್ ಶೋ

    ಮೈಸೂರಿನ ಜಿಲ್ಲಾಡಳಿತದ ವತಿಯಿಂದ ನಡೆಯುತ್ತಿರುವ ವಿಂಟರ್ ಫೆಸ್ಟಿವಲ್ ಜನರ ಮನಸೂರೆಗೊಂಡಿದೆ

  • ಹೂವಿನಲ್ಲಿ ಮೂಡಿಬಂದ ಅರಮನೆ

    ಡಿ.24ರಿಂದ 9 ದಿನ ವಿವಿಧ ಕಾರ್ಯಕ್ರಮಗಳ ಮೂಲಕ ಮನರಂಜನೆ ನೀಡಲು ಸಜ್ಜಾಗಿದೆ ಸಾಂಸ್ಕೃತಿಕನಗರಿ.

  • ಸಿಂಹಾಸನದ ಮೇಲೆ ಆಸೀನರಾದ ಜಯ ಚಾಮರಾಜ ಒಡೆಯರ್

    ವಿವಿಧ ಬಗೆಯ ಹೂಗಳಿಂದ ನಿರ್ಮಾಣಗೊಂಡ ಸಿಂಹಾಸನದ ಮೇಲೆ ಆಸೀನರಾದ ಜಯ ಚಾಮರಾಜ ಒಡೆಯರ್

  • ಡಿಕೆಶಿಗೆ ಸೇಬಿನ ಹಾರ

    ಹುಬ್ಬಳ್ಳಿಗೆ ಆಗಮಿಸಿದ ಮಾಜಿ ಸಚಿವ ಡಿಕೆ ಶಿವಕುಮಾರ್‌ಗೆ ಅಭಿಮಾನಿಗಳು ಭಾರಿ ಗಾತ್ರದ ಸೇಬಿನ ಅರ್ಪಿಸಿದರು.

  • ಡಿಕೆ ಶಿವಕುಮಾರ್ ಹಾಗೂ ದೇವೇಗೌಡ ಭೇಟಿ

    ಮೈಸೂರು ಚಾಮುಂಡಿ ಬೆಟ್ಟದಲ್ಲಿ ಪೂಜೆ ಸಲ್ಲಿಸಿ ಡಿಕೆ ಶಿವ ಕುಮಾರ್ ಹೊರ ಬರುತ್ತಿದ್ದಂತೆಯೇ ಎಚ್‌ಡಿ ದೇವೇಗೌಡ ದೇವಳಕ್ಕೆ ಆಗಮಿಸಿದರು.

  • ಮೈಸೂರು ಚಾಮುಂಡೇಶ್ವರಿ ತಾಯಿಗೆ ಪೂಜೆ ಸಲ್ಲಿಸಿದ ಡಿ.ಕೆ ಶಿವಕುಮಾರ್ ಜಿಟಿ ದೇವೇಗೌಡ ಸಾಥ್

    ಶುಕ್ರವಾರ ಬೆಳಗ್ಗೆ ಮೈಸೂರು ಚಾಮುಂಡೇಶ್ವರಿ ದೇವಾಲಯದಲ್ಲಿ ಚಾಮುಂಡಿ ತಾಯಿಗೆ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರಿಂದ ವಿಶೇಷ ಪೂಜೆ. ಇವರ ಜೊತೆ ಮಾಜಿ ಸಚಿವ ಜಿ ಟಿ ದೇವೇಗೌಡ ಕೂಡ ಇದ್ದರು.

  • ದೇವಾಲಯದಲ್ಲಿ ಮುಖಾಮುಖಿಯಾದ ಡಿಕೆಶಿ ಮತ್ತು ದೇವೇಗೌಡ

    ಮಾಜಿ ಸಚಿವ ಡಿಕೆ ಶಿವಕುಮಾರ್ , ಜಿ.ಟಿ ದೇವೇಗೌಡ ಪೂಜೆ ಮುಗಿಸಿ ಹೊರ ಬರುತ್ತಿದ್ದಂತೆಯೇ ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡ ಕೂಡ ಚಾಮುಂಡಿ ಸನ್ನಿಧಿಗೆ ಆಗಮಿಸಿದರು. ದೇವಾಲಯದಲ್ಲಿ ಉಭಯ ನಾಯಕರು ಮುಖಾಮುಖಿಯಾದರು.

  • ಡಿಕೆಶಿ ಮತ್ತು ದೇವೇಗೌಡರಿಂದ ಚಾಮುಂಡಿ ತಾಯಿಗೆ ಪೂಜೆ

    ಚಾಮುಂಡಿ ತಾಯಿಗೆ ಪೂಜೆ ಸಲ್ಲಿಸಿ ಆರತಿ ತೆಗೆದುಕೊಳ್ಳುತ್ತಿರುವ ದೇವೇಗೌಡ. ದೇವಾಲಯದಲ್ಲಿ ತೆಂಗಿನ ಕಾಯಿ ಒಡೆಯುತ್ತಿರುವ ಡಿಕೆ ಶಿವಕುಮಾರ್

  • ಆಯೋಧ್ಯೆ ತೀರ್ಪು: ಯಾರ ಪರವಾಗಿ ಬಂದರೂ ಕೋಮು ಸೌಹಾರ್ದ ಕಾಪಾಡಿ

    ಅಯೋಧ್ಯೆಯ ರಾಮಜನ್ಮ ಭೂಮಿ ಬಾಬ್ರಿ ಮಸೀದಿ ವಿವಾದದ ಬಗ್ಗೆ ಸದ್ಯದಲ್ಲೇ ಸುಪ್ರೀಂ ಕೋರ್ಟ್ ನಿಂದ ಅಂತಿಮ ತೀರ್ಪು ಹೊರಬರುತ್ತಿರುವ ಹಿನ್ನೆಲೆಯಲ್ಲಿ ಸಮಾಜದಲ್ಲಿ ಶಾಂತಿ ಸೌಹಾರ್ದತೆ ಕಾಯ್ದುಕೊಳ್ಳುವ ಅಗತ್ಯವಿದೆ, ತೀರ್ಪು ಯಾರ ಪರ ಬಂದರೂ ಎಲ್ಲ ಧರ್ಮ‌ಜಾತಿ ಸಂಘಟನೆಗಳು ಅದಕ್ಕೆ ಬದ್ದವಾಗಿ ಪಡೆದುಕೊಳ್ಳಬೇಕು ಎಂದು ಕೋಮು ಸೌಹಾರ್ದ ಸಂಘಟನೆ ಪರವಾಗಿ ನಿವೃತ್ತ ನ್ಯಾ ವಿ ಗೋಪಾಲಗೌಡ, ನ್ಯಾ ಮಹಮ್ಮದ್ ಅನ್ವರ್ , ಸಾಹಿತಿಗಳಾದ ಕೆ ಮರುಳ ಸಿದ್ದಪ್ಪ, ಬರಗೂರು ರಾಮಚಂದ್ರಪ್ಪ, ಚಿಂತಕ ಗಾಂಧಿವಾದಿ ಪ್ರಸನ್ನ ಮನವಿ ಮಾಡಿದರು.

  • ಕಂಪ್ಲಿ ಸೇತುವೆ ಜಲಾವೃತ

    ತುಂಗಭದ್ರಾ ಜಲಾಶಯದಿಂದ ನದಿಗೆ ನೀರು ಬಿಡಲಾಗಿದ್ದು, ಮಂಗಳವಾರ ಕಂಪ್ಲಿ ಗಂಗಾವತಿ ಸಂಪರ್ಕ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ.

  • ರಾಮದುರ್ಗ

    ಭಾರಿ ಮಳೆಗೆ ರಾಮದುರ್ಗದ ಪ್ರೇರಣ ಆಂಗ್ಲ ಮಾಧ್ಯಮ ಶಾಲೆ ಜಲಾವೃತಗೊಂಡಿದೆ.

  • ಕಲಾಂಗೆ ಸಲಾಂ..

    ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್‌ ಕಲಾಂ ಅವರ
    ಜನ್ಮದಿನವಾದ ಮಂಗಳವಾರ ದೇಶ ನಮನ ಸಲ್ಲಿಸಿತು.
    ಹೊಸದಿಲ್ಲಿಯ ಡಿಆರ್‌ಡಿಒ ಆವರಣದಲ್ಲಿರುವ ಕಲಾಂ ಪುತ್ಥಳಿಗೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

  • ಚಾಮುಂಡೇಶ್ವರಿ ರಥೋತ್ಸವ

    ಮೈಸೂರಿನಲ್ಲಿ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ದೇವಿ ರಥೋತ್ಸವ ನಡೆಯಿತು.

  • ಮೈಸೂರು ಸೆಂಟ್ರಲ್‌

    ಡ್ರೋನ್‌ನಲ್ಲಿ ಕಂಡ ದೀಪಾಲಂಕೃತ ಮೈಸೂರು ಸೆಂಟ್ರಲ್‌ !

  • ಸಿಎಂ ನಿವಾಸದಲ್ಲಿ ಆಯುಧಪೂಜೆ

    ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ನಿವಾಸ ಧವಳಗಿರಿಯಲ್ಲಿ ಆಯುಧಪೂಜೆ ಅಂಗವಾಗಿ ವಾಹನಗಳಿಗೆ ಪೂಜಾ ಕಾರ್ಯ ನೆರವೇರಿಸಿದರು.

  • ತಿರುಪತಿ ಬ್ರಹ್ಮೋತ್ಸವ - ಹನುಮಂತ ವಾಹನ

    ತಿರುಪತಿ ಬ್ರಹ್ಮೋತ್ಸವದಲ್ಲಿ ಹನುಮಂತ ವಾಹನದಲ್ಲಿ ಬಾಲಾಜಿ

  • ಕೊಲ್ಲಾಪುರ ಮಹಾಲಕ್ಷ್ಮಿ ದೇವಸ್ಥಾನ

    ಕೊಲ್ಲಾಪುರದ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ನವರಾತ್ರಿ ಸಂಭ್ರಮ

  • ತಿರುಪತಿ ಬ್ರಹ್ಮೋತ್ಸವ 5ನೇ ದಿನ. ಮೋಹಿನಿ ಅವತಾರದಲ್ಲಿ ಬಾಲಾಜಿ

    ತಿರುಪತಿ ಬ್ರಹ್ಮೋತ್ಸವ 5ನೇ ದಿನ. ಮೋಹಿನಿ ಅವತಾರದಲ್ಲಿ ಬಾಲಾಜಿ

  • ಕೊಡಗು ಜಾನಪದ ಉತ್ಸವಕ್ಕೆ ಚಾಲನೆ

    ಮಡಿಕೇರಿ ದಸರಾ ಜನೋತ್ಸವ ಅಂಗವಾಗಿ ಕೊಡಗು ಜಾನಪದ ಉತ್ಸವಕ್ಕೆ ಚಾಲನೆ ನೀಡಲಾಗಿದೆ. ರಾಜ್ಯದ ಸಾಂಸ್ಕೃತಿಕ ಶ್ರೀಮಂತಿಕೆ ಬಿಂಬಿಸುವ ಕಲಾತಂಡಗಳ ಮೆರವಣಿಗೆ ನಡೆಯಿತು.

  • ಕೊಲ್ಲಾಪುರ ಮಹಾಲಕ್ಷ್ಮಿ ಮಂದಿರಕ್ಕೆ ನವರಾತ್ರಿ ನಿಮಿತ್ತ ವಿಶೇಷ ದೀಪಾಲಂಕಾರ

    ಕೊಲ್ಲಾಪುರ ಮಹಾಲಕ್ಷ್ಮಿ ಮಂದಿರಕ್ಕೆ ನವರಾತ್ರಿ ನಿಮಿತ್ತ ವಿಶೇಷ ದೀಪಾಲಂಕಾರ

  • ಚಾಮುಂಡೇಶ್ವರಿ ಉತ್ಸವ ಮೂರ್ತಿ ಸಿದ್ಧತೆ

    ದಸರಾ ಮಹೋತ್ಸವದ ಉದ್ಘಾಟನೆ ಪ್ರಯುಕ್ತ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಶುಚಿಗೊಳಿಸುವ ಕಾರ್ಯಕ್ರಮ ನಡೆಯಿತು.

  • ದೀಪಾಲಂಕಾರದಲ್ಲಿ ಮೈಸೂರು ಅರಮನೆ

    ದಸರಾ ಹಿನ್ನೆಲೆಯಲ್ಲಿ ಮೈಸೂರು ಅರಮನೆಗೆ ದೀಪಾಲಂಕಾರ...

  • ಬೆಣ್ಣೆ ಕದಿಯುವ ಕೃಷ್ಣನಿಗೆ ಬೆಣ್ಣೆ ಅಲಂಕಾರ

    ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕು ದೊಡ್ಡ ಮಳೂರು ಗ್ರಾಮದಲ್ಲಿರುವ ವಿಶ್ವವಿಖ್ಯಾತ ದೇವಸ್ಥಾನ ಕೃಷ್ಣನ ದೇಗುಲದಲ್ಲಿ ವಿಶ್ವ ಪ್ರಸಿದ್ಧ ಅಂಬೆಗಾಲು ಕೃಷ್ಣನಿಗೆ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಬೆಣ್ಣೆ ಅಲಂಕಾರ

  • ಯೋಧರ ಬಲಿದಾನ ಸ್ಮರಣೆ

    ಚನ್ನರಾಯಪಟ್ಟಣದ ಜ್ಞಾನಸಾಗರ ಇಂಟರ್‌ನ್ಯಾಷನಲ್‌ ಪಬ್ಲಿಕ್‌ ಶಾಲೆಯಲ್ಲಿ ಕಾರ್ಗಿಲ್‌ ವಿಜಯ ದಿನಾಚರಣೆಯಲ್ಲಿ ಹುತಾತ್ಮ ಯೋಧರ ಸ್ಮರಣೆ ಮಾಡಲಾಯಿತು.

  • ಹೈಟೆಕ್ ಶಾಲೆ

    ಬೆಂಗಳೂರು ಉತ್ತರ ತಾಲೂಕಿನ ನವರತ್ನ ಅಗ್ರಹಾರದಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಹೈಟೆಕ್ ಸರಕಾರಿ ಶಾಲೆ ಉದ್ಘಾಟನೆಗೊಂಡಿತು.

  • ಬನಶಂಕರಿ ದೇವಿಗೆ ಆಷಾಢ ಶುಕ್ರವಾರ ಅಲಂಕಾರ

    ಅಷಾಢ ಶುಕ್ರವಾರ ಅಂಗಾವಾಗಿ ಬೆಂಗಳೂರಿನ ಬನಶಂಕರಿ ದೇವಾಲಯದಲ್ಲಿ ದೇವಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಯಿತು.

  • ಗುರು ಪೌರ್ಣಿಮೆಯಂದು ಪೇಜಾವರ ಆಶೀರ್ವಾದ ಪಡೆದ ಮೋದಿ

    ಗುರು ಪೂರ್ಣಿಮೆಯ ದಿನದಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರ ಆಶೀರ್ವಾದ ಪಡೆದ ಪ್ರಧಾನಮಂತ್ರಿ ನರೇಂದ್ರ ಮೋದಿ.

  • ವಾಷಿಂಗ್ಟನ್‌ನ ಸುತ್ತೂರು ಮಠಕ್ಕೆ ಭೇಟಿ ನೀಡಿದ ಸಿಎಂ ಕುಮಾರಸ್ವಾಮಿ

    ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿಯವರು ಇಂದು ವಾಷಿಂಗ್ಟನ್ ಡಿಸಿ ಸಮೀಪದ ಮೇರಿಲ್ಯಾಂಡ್‌ನಲ್ಲಿ ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು

  • ಮೈದುಂಬಿದ ಜೋಗ

    ಮಲೆನಾಡಲ್ಲಿ ಮುಂಗಾರು ಒಂದು ತಿಂಗಳು ವಿಳಂಬವಾಗಿದ್ದು ಮೊದಲ ಬಾರಿ ಜೋಗ ಮೈದುಂಬಿಕೊಂಡಿದೆ. ಚಿತ್ರ: ಗೈಡ್ ನಾಗರಾಜ್

  • ಸೋಂದಾ ಕ್ಷೇತ್ರಕ್ಕೆ ಪಲಿಮಾರು ಕಿರಿಯ ಶ್ರೀಗಳ ಭೇಟಿ

    ಉಡುಪಿ ಪಲಿಮಾರು ಕಿರಿಯ ಮಠಾಧೀಶರಾದ ಶ್ರೀ ವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರು ಸಂನ್ಯಾಸ ಸ್ವೀಕರಿಸಿ ಮೊದಲ ಬಾರಿಗೆ ಸೋದಾ ಕ್ಷೇತ್ರಕ್ಕೆ ಆಗಮಿಸಿ ರಮಾ ತ್ರಿವಿಕ್ರಮದೇವರ , ಭಾವಿಸಮೀರ ಶ್ರೀವಾದಿರಾಜರ ಹಾಗೂ ಶ್ರೀಭೂತರಾಜರ ದರ್ಶನ ಪಡೆದರು.

  • ನಿರ್ಮಲಾ ಸೀತಾರಾಮನ್ ಭೇಟಿ ಮಾಡಿದ ಸಚಿವ ಡಿಕೆಶಿ

    ಕರ್ನಾಟಕ ಜಲಸಂಪನ್ಮೂಲ, ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿ.ಕೆ. ಶಿವಕುಮಾರ್ ಮಂಗಳವಾರ ದಿಲ್ಲಿಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿದರು.

  • ಪಾಕ್ ವಿರುದ್ಧದ ಕ್ರಿಕೆಟ್ ಪಂದ್ಯದಲ್ಲಿ ಭಾರತದ ಗೆಲುವಿಗೆ ಪೂಜೆ

    ಪಾಕ್ ವಿರುದ್ಧದ ಪಂದ್ಯದಲ್ಲಿ ಭಾರತ ಜಯ ಸಾಧಿಸಲಿ ಎಂದು ಹಾರೈಸಿ ಬಾಗಲಕೋಟೆ ನಗರದಲ್ಲಿ ಕ್ರಿಕೆಟ್ ಪ್ರೇಮಿಗಳು ಆಂಜನೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.

  • ಮೋದಿ ಭೇಟಿಯಾದ ಎಚ್‌ಡಿಕೆ

    ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮರುಆಯ್ಕೆಯಾಗಿದ್ದಕ್ಕಾಗಿ ಅಭಿನಂದಿಸಿದರು.

  • ನೂತನ ಸಚಿವರ ಗೆಲುವಿನ ನಗು

    ರಾಜಭವನದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಪಕ್ಷೇತರ ಶಾಸಕರಾದ ವಿ. ನಾಗೇಶ್‌ ಮತ್ತು ಆರ್‌. ಶಂಕರ್‌ ಅವರಿಂದ ವಿಜಯದ ಸಂಕೇತ.

  • ಶಂಕರ್‌, ನಾಗೇಶ್‌ ನೂತನ ಸಚಿವರಾಗಿ ಪ್ರಮಾಣವನ

    ರಾಜಭವನದಲ್ಲಿ ಶುಕ್ರವಾರ ನೂತನ ಸಚಿವರಾಗಿ ಶಂಕರ್‌ ಹಾಗೂ ನಾಗೇಶ್‌ ಅವರು ಪ್ರಮಾಣವಚನ ಸ್ವೀಕರಿಸಿದರು.

  • ಆನ್‌ಲೈನ್‌ ಸೇವೆಗೆ ಸಿಎಂ ಎಚ್‌ಡಿಕೆ ಚಾಲನೆ

    ಕಟ್ಟಡ ನಕ್ಷೆ ಮತ್ತು ಭೂಪರಿವರ್ತನೆಯಲ್ಲಿ ಆನ್‌ಲೈನ್‌ ವ್ಯವಸ್ಥೆಗೆ ಸಿಎಂ ಕುಮಾರಸ್ವಾಮಿ ಚಾಲನೆ ನೀಡಿದರು.

  • ಬಿಸಿಯೂಟ ಸೇವನೆ

    ಚಳ್ಳಕೆರೆ ತಾಲೂಕಿನ ಶಾಲೆಯೊಂದರಲ್ಲಿ ಬಿಸಿಯೂಟ ಸವಿಯುತ್ತಿರುವ ಮಕ್ಕಳು

  • ರಸ್ತೆಯಲ್ಲಿ ಬಿದ್ದ ಗಾಜಿನ ಪುಡಿ ಗುಡಿಸಿದ ಟ್ರಾಫಿಕ್‌ ಪೊಲೀಸ್‌

    ನಗರದ ಅರ್ ಬಿ ಐ ಬಡಾವಣೆ ಯ ಮುಖ್ಯ ರಸ್ತೆ ಯಲ್ಲಿ ಬಿದ್ದಿದ ಗಾಜಿನ ಪುಡಿಯನ್ನು ಹುಳಿಮಾವು ಟ್ರಾಫಿಕ್ ಪೋಲಿಸ್ ಗುಡಿಸಿ ಹೊರಹಾಕಿದರು

  • ಮಂತ್ರಾಲಯ ರಥೋತ್ಸವಕ್ಕೆ ಚಾಲನೆ

    ಮಂತ್ರಾಲಯದಲ್ಲಿ ಶ್ರೀವಾದೀಂದ್ರತೀರ್ಥರ ಆರಾಧನೆ ನಿಮಿತ್ತ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರಿಂದ ಪೂರ್ವ ಯತಿಗಳ ರಥೋತ್ಸವಕ್ಕೆ ಚಾಲನೆ

  • 250 ಕೆಜಿ ತೂಕದ, 15 ಅಡಿ ಉದ್ದದ ಪೆನ್

    ಸಾಗರ ತಾಲೂಕಿನ ಆವಿನಹಳ್ಳಿಯ ಕುಶಲ ಕರ್ಮಿ ಕೃಷ್ಣಮೂರ್ತಿ ಆಚಾರ್‌ ಅವರು 19 ಅಡಿ ಉದ್ದದ ಪೆನ್‌ ನಿರ್ಮಿಸಿದ್ದಾರೆ.

  • ಸಿಎಸ್‌ ಪುತ್ರಿ ವಿವಾಹದಲ್ಲಿ ಸಿಎಂ, ಡಿಸಿಎಂ

    ಮುಖ್ಯ ಕಾರ್ಯದರ್ಶಿ ಟಿಎಂ ವಿಜಯಭಾಸ್ಕರ್‌ ಪುತ್ರಿ ವಿಶೃತಿ ಮತ್ತು ಗೌತಮ್‌ ಕುಮಾರ್‌ ರಾಜ ವಿವಾಹದಲ್ಲಿ ಸಿಎಂ, ಡಿಸಿಎಂ ಭಾಗಿ.

  • ವಿಶ್ವಕಪ್ ಥೀಮ್ ಖಾದ್ಯ

    ವಿಶ್ವಕಪ್‌ ಕ್ರಿಕೆಟ್‌ ಮೇನಿಯಾ ಅನೇಕ ಸ್ಟೋರೆಂಟ್‌ಗಳಿಗೂ ವ್ಯಾಪಿಸಿದೆ. ಕೆಲವು ರೆಸ್ಟೋರೆಂಟ್‌ಗಳು ಕ್ರಿಕೆಟ್‌ ಥೀಮ್‌ನ ಖಾದ್ಯಗಳನ್ನು ಮಾಡಿ ಸರ್ವ್‌ ಮಾಡುತ್ತಿವೆ. ಈ ಪೈಕಿ ಪಶ್ಚಿಮ ಬಂಗಾಳದ ಸೆರಾಂಪುರ ನಗರದಲ್ಲಿರುವ ರೆಸ್ಟೋರೆಂಟ್‌ ಕೂಡಾ ಒಂದು. ಇಲ್ಲಿ ಐಸಿಸಿ ವರ್ಲ್ಡ್‌ಕಪ್‌ ಥೀಮ್‌ನ ಅನೇಕ ಖಾದ್ಯ, ಸಿಹಿ ತಿಂಡಿ ಮತ್ತು ಪಾನೀಯಗಳು ಕಾಣಿಸಿಕೊಂಡಿವೆ.

  • ಭಾರತ ಮಾತೆಗೆ ಪುಷ್ಪನಮನ

    ಸಂಸದೆ ಸುಮಲತಾ ಶನಿವಾರ ಬಿಜೆಪಿ ಕಚೇರಿಗೆ ಭೇಟಿ ನೀಡಿದ ಸಂದರ್ಭ ಭಾರತ ಮಾತೆ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

  • ವಯನಾಡಿನಲ್ಲಿ ರಾಹುಲ್ ರೋಡ್‌ ಶೋ

    ಕೇರಳದ ವಯನಾಡಿನಲ್ಲಿ ರಾಹುಲ್ ಗಾಂಧಿ ಶುಕ್ರವಾರ ರೋಡ್ ಶೋ ನಡೆಸಿದರು. ಮತದಾರರಿಗೆ ಕೃತಜ್ಞತೆ ಸಲ್ಲಿಸಲು ವಯನಾಡಿಗೆ ತೆರಳಿದ್ದಾರೆ.

  • ಯೋಗಿಯಿಂದ ಶ್ರೀರಾಮ ಪ್ರತಿಮೆ ಅನಾವರಣ

    ಕರ್ನಾಟಕದಿಂದ ಬೀಟೆ ಮರ ತರಿಸಿ ಕೆತ್ತನೆ ಮಾಡಿದ ಏಳು ಅಡಿ ಎತ್ತರದ ಶ್ರೀರಾಮನ ಪ್ರತಿಮೆಯನ್ನು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌
    ಶುಕ್ರವಾರ ಅಯೋಧ್ಯೆಯಲ್ಲಿ ಲೋಕಾರ್ಪಣೆ ಮಾಡಿದರು.

  • ಸಿಎಂ ಜನತಾ ದರ್ಶನ

    ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಗೃಹ ಕಚೇರಿ ಕೃಷ್ಣಾದಲ್ಲಿ ಜನತಾ ದರ್ಶನ ನಡೆಸಿದರು