ಜಾಗತಿಕ ಮಟ್ಟದಲ್ಲಿ ತಾಪಾಮಾನದ ಏರುಪೇರಿನಿಂದಾಗಿ ವರ್ಷಂಪ್ರತಿ ಉಂಟಾಗುತ್ತಿರುವ ಕಾಡ್ಗಿಚ್ಚು ಘಟನೆಗಳಿಗೆ ಅರಣ್ಯಗಳು ಪ್ರದೇಶಗಳು ಬೆಂಕಿಗಾಹುತಿಯಾಗುತ್ತಿದೆ. ಉತ್ತರಾಖಂಡದಲ್ಲಿ 46 ಇಂತಹ ಕಾಡ್ಗಿಚ್ಚು ಘಟನೆಗಳು ವರದಿಯಾಗಿದ್ದು, ಸುಮಾರು 51.34 ಹೆಕ್ಟೇರ್ ಅರಣ್ಯ ಪ್ರದೇಶಗಳು ನಾಶವಾಗಿದೆ. ಶ್ರೀನಗರ ನಗರದಿಂದ ಮೂರು ಕೀ.ಮೀ. ದೂರದಲ್ಲಿರುವ ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಗಾಳಿಯ ಪ್ರಭಾವದಿಂದಾಗಿ ಮತ್ತಷ್ಟು ಪ್ರದೇಶಗಳಿಗೆ ಬೆಂಕಿ ಪಸರಿಸಿದೆ. ಕುಮಾವೂನ್ ಪ್ರದೇಶದಲ್ಲಿ ಮಾತ್ರವಾಗಿ 21ರಷ್ಟು ಕಾಡ್ಗಿಚ್ಚು ಪ್ರಕರಣಗಳು ದಾಖಲಾಗಿದೆ. ಗರ್ವಾಲ್ ಹಾಗೂ ರಾಜ್ಯದ ಮೀಸಲು ಅರಣ್ಯ ಪ್ರದೇಶಗಳಲ್ಲಿ ಅನುಕ್ರಮವಾಗಿ 16 ಹಾಗೂ ಒಂಬತ್ತು ಕಾಡ್ಗಿಚ್ಚು ಪ್ರಕರಣಗಳು ಕಂಡುಬಂದಿದೆ.