ಕೊರೊನಾ ವೈರಸ್ ಹಿಮ್ಮೆಟ್ಟಿಸಲು ದೇಶಾದ್ಯಂತ ಲಾಕ್ಡೌನ್ ಘೋಷಿಸಲಾಗಿದೆ. ಜನ ಪರಸ್ಪರ ಅಂತರ ಕಾಯ್ದುಕೊಂಡರೆ, ಮೂರನೇ ಹಂತದಲ್ಲಿಕೊರೊನಾ ವೈರಸ್ ಜನರ ದೇಹ ಸೇರುವುದನ್ನು ತಪ್ಪಿಸಬಹುದು ಎಂಬ ಸದುದ್ದೇಶದಲ್ಲಿ ಕೇಂದ್ರ ಸರಕಾರ ಮೂರು ವಾರಗಳ ಲಾಕ್ಡೌನ್ ಘೋಷಿಸಿದೆ. ಆ ನಿಟ್ಟಿನಲ್ಲಿಈಗಾಗಲೇ ಸಾಕಷ್ಟು ಸಲಹೆ-ಸೂಚನೆಗಳನ್ನೂ ನೀಡಿದ್ದಾಗಿದೆ. ಸರಕಾರದ ಈ ಕ್ರಮಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯೂ ಸಾಥ್ ನೀಡಿದೆ. ಟೀಮ್ ಇಂಡಿಯಾ ಸದಸ್ಯರು ಮೈದಾನದಲ್ಲಿರುವಾಗಿನ ಕೆಲವು ವಿಶಿಷ್ಟ ಭಂಗಿಗಳನ್ನು ಬಿಸಿಸಿಐ 'ಜನಜಾಗೃತಿಯ ಅಭಿಯಾನ'ದಂತೆ ಬಿಂಬಿಸಿ ತನ್ನ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದೆ.