ಆ್ಯಪ್ನಗರ

ಎಚ್ಡಿಕೆ ಹೋದ ಕಡೆಯಲ್ಲೆಲ್ಲಾ ಮಳೆ, ಸಿದ್ದುಗೆ ಪತ್ರ

ಮಾಜಿ ಮುಖ್ಯಮಂತ್ರಿ ಹಾಗೂ ರಾಜ್ಯ ಜೆಡಿಎಸ್ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರು ರಾಜ್ಯದಾದ್ಯಂತ ಬಿರುಸಿನ ಪ್ರವಾಸ ಮಾಡುತ್ತಿದ್ದಾರೆ. ಗುರುವಾರವಷ್ಟೇ ಅವರು ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಆದಿಚುಂಚನಗಿರಿಗೆ ಭೇಟಿ ನೀಡಿ ಅಮಾವಾಸ್ಯೆ ಪೂಜೆ ಮಾಡಿಸಿದ್ದರು. ಆ ಬಳಿಕ ಮಾತನಾಡುತ್ತಾ, ತಾವು ಹೋದ ಕಡೆಯಲ್ಲೆಲ್ಲ ಮಳೆಯಾಗುತ್ತಿದೆ ಎಂದಿದ್ದರು.

ವಿಕ ಸುದ್ದಿಲೋಕ 26 May 2017, 7:09 pm
ಮಂಡ್ಯ : ಮಾಜಿ ಮುಖ್ಯಮಂತ್ರಿ ಹಾಗೂ ರಾಜ್ಯ ಜೆಡಿಎಸ್ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರು ರಾಜ್ಯದಾದ್ಯಂತ ಬಿರುಸಿನ ಪ್ರವಾಸ ಮಾಡುತ್ತಿದ್ದಾರೆ. ಗುರುವಾರವಷ್ಟೇ ಅವರು ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಆದಿಚುಂಚನಗಿರಿಗೆ ಭೇಟಿ ನೀಡಿ ಅಮಾವಾಸ್ಯೆ ಪೂಜೆ ಮಾಡಿಸಿದ್ದರು. ಆ ಬಳಿಕ ಮಾತನಾಡುತ್ತಾ, ತಾವು ಹೋದ ಕಡೆಯಲ್ಲೆಲ್ಲ ಮಳೆಯಾಗುತ್ತಿದೆ ಎಂದಿದ್ದರು.
Vijaya Karnataka Web wherever hdk goes its raining bjp letter to siddaramaiah
ಎಚ್ಡಿಕೆ ಹೋದ ಕಡೆಯಲ್ಲೆಲ್ಲಾ ಮಳೆ, ಸಿದ್ದುಗೆ ಪತ್ರ


ಈ ಬಗ್ಗೆ ಮಂಡ್ಯದ ಬಿಜೆಪಿ ಕಾರ್ಯಕರ್ತ ಮಂಜುನಾಥ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದಾರೆ. ಪಾತಾಳಗಂಗೆ ಯೋಜನೆ ಹಾಗೂ ಮೋಡ ಬಿತ್ತನೆ ಯೋಜನೆಯ ಹಣವನ್ನ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಯವರಿಗೆ ನೀಡುವಂತೆ ಪತ್ರದಲ್ಲಿ ತಿಳಿಸಿದ್ದಾರೆ.

ರಾಜ್ಯದಲ್ಲಿ ಬರ ಇರೋ ಕಡೆಗಳಿಗೆ ಸರಕಾರದ ಸವಲತ್ತು ನೀಡಿ ಕುಮಾರಸ್ವಾಮಿಯವರನ್ನ ಕಳುಹಿಸಿ ಭಾಷಣ ಮಾಡಿಸಿ ಮಳೆ ಬರಿಸುವಂತೆ ಮಾಡಿ. ಕುಮಾರಸ್ವಾಮಿ ಯವರ ಅದೃಷ್ಟದಿಂದ ಬರ ಇರೋ ಕಡೆಗಳಲ್ಲಿ ಮಳೆಯಾಗಲಿ, ಆ ಮೂಲಕ ಸರಕಾರದ ಬೊಕ್ಕಸ ತುಂಬಲಿ ಎಂದಿದ್ದಾರೆ.

'ಬರಗಾಲದ ಹಿನ್ನೆಲೆಯಲ್ಲಿ ಪೂಜೆ ಮಾಡಿಸಿದ್ದೇನೆ. ದೇವರ ಅನುಗ್ರಹ ಬೇಕು. ಸಮಸ್ಯೆಗೆ ಪರಿಹಾರ ಭಗವಂತ ನೀಡಬೇಕು. ಪೂಜೆಯ ನಂತರ ನಾನು ರಾಜ್ಯಾದ್ಯಂತ ಪ್ರವಾಸ ಮಾಡಿದೆ. ನನ್ನ ದೇಹಕ್ಕೆ ಶ್ರಮ ಅನ್ನೋದು ಕಾಣಲಿಲ್ಲ. ನನ್ನ ದೇಹಕ್ಕೆ ಚೈತನ್ಯ ಕೇಳಲು ಪೂಜೆ ಮಾಡ್ತಿದ್ದೇನೆ. ದೇವರ ಸನ್ನಿಧಾನದಲ್ಲಿ ಪೂಜೆ ಸಲ್ಲಿಸಿದ ನಂತರ ಮಳೆಯಾಗಿದೆ. ನಾನು ಹೋದ ಎಲ್ಲ ಕಡೆ ಭಾಷಣ ಮಾಡಲು ಆರಂಭಿಸಿದ ಕ್ಷಣ ಮಳೆ ಆರಂಭವಾಗಿದೆ.
ಅದಕ್ಕೆ ದೇವರ ಅನುಗ್ರಹವಿದೆ' ಎಂದಿದ್ದರು ಕುಮಾರಸ್ವಾಮಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ